ಮೈಸೂರು: ಈ ಬಾರಿಯ ಚಳಿಗಾಲದ ಅಧಿವೇಶನದ ಕೊನೆಯ ದಿನದಲ್ಲಿ ಗೃಹಲಕ್ಷ್ಮೀ ಯೋಜನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲೂ ಬಿಜೆಪಿ ನಾಯಕರು ಐದು ಸಾವಿರ ಕೋಟಿ ಎಲ್ಲಿ ಹೋಯ್ತು ಎಂದು ಗುಡುಗಿದ್ದರು. ಈ ಸಂಬಂಧ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಫೆಬ್ರವರಿ – ಮಾರ್ಚ್ ತಿಂಗಳ ಹಣ ಬಿಡುಗಡೆಯಾಗಿಲ್ಲ. ಪರಿಶೀಲನೆ ಮಾಡಿ ಬಿಡುಗಡೆ ಮಾಡ್ತೀವಿ. ಬಿಜೆಪಿ ಟಾರ್ಗೆಟ್ ಏನು. ಹಣ ಅವರು ಕೊಡುತ್ತಾ ಇದ್ದಾರಾ..? ನಾವೂ ಇಲ್ಲಿವರೆಗೆ ಸುಮಾರು 23 ತಿಂಗಳು ಕೊಟ್ಟಿದ್ದೀವಿ. ಹಣ ಇಲ್ಲದೆ ಇಲ್ಲಿಯವರೆಗೂ ಕೊಡುವುದಕ್ಕೆ ಆಗುತ್ತಾ..? ಹೇಗೆ ಆ ಹಣವನ್ನ ಲಪಟಾಯಿಸೋದಕ್ಕೆ ಸಾಧ್ಯ. ಅವರ ಅಕೌಂಟ್ ಗೆ ಹೋಗುವುದು ಹೇಗೆ ಲಪಟಾಯಿಸೋದಕ್ಕೆ ಸಾಧ್ಯ. ಯಾರೂ ಆ ಹಣವನ್ನ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆ ಹಣ ಬಿಡುಗಡೆಯೇ ಆಗಿಲ್ಲ ಎಂದಿದ್ದಾರೆ.
ಇದೇ ವೇಳೆ ಪ್ರಚೋದನಕಾರಿ ಭಾಷಣ ಬಗ್ಗೆ ಮಾತನಾಡಿ, ಯಾರೂ ಪ್ರಚೋದನಕಾರಿ ಭಾಷಣ ಮಾಡುತ್ತಾರೆ ಅವರೇ ಇದನ್ನೆಲ್ಲ ವಿರೋಧಿಸುವುದು. ಪ್ರಚೋದನಕಾರಿ ಭಾಷಣ ಮಾಡದೆ ಹೋದರೆ ನಿಮ್ಮ ಮೇಲೆ ಯಾಕೆ ಸುಮ್ಮ ಸುಮ್ಮನೆ ಕೇಸ್ ಹಾಕ್ತೀವಿ. ಬಿಜೆಪಿಯವರು ಕುಂಬಳಕಾಯಿ ಕಳ್ಳ ಅಂದಾಜ್ಷಣ ಯಾಕೆ ಹೆಗಲು ಮುಟ್ಟಿನೋಡಕೊಳ್ಳಬೇಕು. ಇದು ಎಲ್ಲರಿಗೂ ಅನ್ವಯವಾಗುತ್ತದೆ. ನಮ್ಮ ಪಕ್ಷದವರು ಮಾಡಿದ್ರು, ಬಿಜೆಪಿ, ಜೆಡಿಎಸ್ ನವರು ಮಾಡಿದ್ರು ಎಲ್ಲರಿಗೂ ಅನ್ವಯವಾಗುತ್ತದೆ. ಈ ರೀತಿಯ ಭಾಷಣದಿಂದ ಶಾಂತಿ ನೆಲೆಸುತ್ತದಾ..? ಬಿಜೆಪಿಯವರು ಪ್ರಚೋದನಾ ಭಾಷಣಾ ಮಾಡುತ್ತಾ ಇದ್ದಾರೆ ಎಂದೇ ಅರ್ಥ ಎಂದು ಪ್ರಚೋದನಕಾರಿ ಭಾಷಣಕ್ಕೆ ಕಡಿವಾಣ ಹಾಕಿದ ಆದೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಕ್ಲಾರಿಟಿ ಕೊಟ್ಟಿದ್ದಾರೆ.





