ಬೆಂಗಳೂರು: ದಿಢೀರ್ ಅಂತ ಎಸ್ಸಿ, ಎಸ್ಟಿ ಶಾಸಕರ ಸಭೆಯನ್ನ ನಡೆಸಲಾಗಿದೆ. ಇದು ರಾಜಕೀಯ ಪಡಸಾಲೆಯಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪೇನಿದೆ, ಎಲ್ಲಾ ಸಮುದಾಯದವರು ಸೇರುತ್ತಾರೆ ಎಂದಿದ್ದಾರೆ.
ಲಿಂಗಾಯತರು ಸೇರುತ್ತಾರೆ, ಅದರಲ್ಲಿ ಅಂತ ತಪ್ಪೇನಿದೆ. ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಸಮುದಾಯದವರು ಸೇರಿದ್ದರು. ಆ ಸಮುದಾಯದವರು ಸೇರಿ ತಮ್ಮ ತಮ್ಮ ಸಮುದಾಯದ, ಜನರ ಸಮಸ್ಯೆಗಳ ಬಗ್ಗೆ, ಸೂಕ್ತ ಪ್ರಾತಿನಿದ್ಯಗಳ ಬಗ್ಗೆ ಚರ್ಚೆ ನಡೆಸ್ತಾರೆ. ಏನು ತಪ್ಪಿದೆ ಎಂದು ಪುನಃ ಪ್ರಶ್ನೆ ಕೇಳಿದ್ದಾರೆ.
ಬೆಳಗಾವಿ ಸಮಾವೇಶದಲ್ಲಿ ಎಲ್ಲಾ ಸಮುದಾಯದವರು ಕೂಡಿದ್ದಾರೆ. ನಾವೂ ಲಿಂಗಾಯತರು ಕೂಡಿರಲಿಲ್ಲ. ಅಜೆಂಡಾ ಏನಿಲ್ಲಾ. ನಮ್ಮ ಲಿಂಗಾಯತರಿಗೂ ನಮಗೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸೋನಿಯಾ ಗಾಂಧಿ ಅವರ ಮೇಲೆ, ರಾಹುಲ್ ಗಾಂಧಿ ಅವರ ಮೇಲೆ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಆ ಮೀಟಿಂಗ್ ನಲ್ಲಿ ಏನು ಚರ್ಚೆ ಆಗಿಲ್ಲ. ಲಿಂಗಾಯತರು ಕೂಡ 34 ಶಾಸಕರು ಹೋಗಿದ್ದರು. ಬಿಗ್ಗೆಸ್ಟ್ ಸಂಖ್ಯೆ ಇರೋದೆ ಲಿಂಗಾಯತರು. ಇಲ್ಲಿ ಯಾರದ್ದು ವೈಯಕ್ತಿಕ ಬೇಡಿಕೆ ಇಲ್ಲ. ಸಮಾಜದ ದೃಷ್ಟಿಯಿಂದ ನಮ್ಮ ಪಾಲು ನಮಗೆ ಸಿಗಬೇಕು, ನಮ್ಮ ಶೇರು ನಮಗೆ ಸಿಗಬೇಕು. ವೈಯಕ್ತಿವಾದಂತ ಬೇಡಿಕೆ ಯಾವುದು ಇಲ್ಲ. ಈ ಬಾರಿ ಲಿಂಗಾಯತರೇ ಮೇಜರ್ ಆಗಿದ್ದೀವಿ. 57 ರಲ್ಲಿ 34 ಜನ ಗೆದ್ದಿದ್ದೀವಿ. ಬಿಜೆಪಿ 72 ಜನರಿಗೇನೋ ಕೊಟ್ಟಿತ್ತು. ಅದರಲ್ಲಿ 13 ಜನ ಗೆದ್ದಿದ್ದಾರೆ. ಅದು ಏನು ತೋರಿಸುತ್ತೆ ಕಾಂಗ್ರೆಸ್ ಕಡೆ ಜನ ವಾಲುತ್ತಿದ್ದಾರೆ ಎಂದಿದ್ದಾರೆ.


