ಎಂಎನ್ ಕುಮಾರ್ ಆರೋಪಕ್ಕೆ ಜಾಕ್ ಮಂಜು ಹೇಳಿದ್ದೇನು..?

1 Min Read

 

ಬೆಂಗಳೂರು: ನಟ ಕಿಚ್ಚ ಸುದೀಪ್ ಬಗ್ಗೆ ನಿರ್ಮಾಪಕ ಎಂಎನ್ ಕುಮಾರ್ ಅವರು ಸರಣಿ ಆರೋಪ ಮಾಡಿದ್ದರು. ಮುಕುಂದ ಮುರಾರಿ ಸಿನಿಮಾ ಆದ್ಮೇಲೆ ಮುತ್ತತ್ತಿ ಸತ್ಯರಾಜು ಸಿನಿಮಾ ಮಾಡಿಕೊಡುವುದಾಗಿ ಒಪ್ಪಿಕೊಂಡು ಮಾಡಿಕೊಡಲಿಲ್ಲ. ಹಣ ಕೂಡ ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಇಂದು ಜಾಕ್ ಮಂಜು ಉತ್ತರ ನೀಡಿದ್ದಾರೆ.

ಇಂದಿ ಸುದ್ದಿಗೋಷ್ಟಿ ನಡೆಸಿದ ಜಾಕ್ ಮಂಜು, ನಟ ಸುದೀಪ್ ಅಭಿಮಾನಿಗಳಿಗೆ ನಾನೇ ಕ್ಲಾರಿಟಿ ಕೊಡ್ತೇನೆ. ಪಾರ್ಥ ಸಿನಿಮಾದಿಂದ ವಿಕ್ರಾಂತ್ ರೋಣದವರೆಗೂ ನಾನು ಸುದೀಪ್ ಜೊತೆಗೆ ಇದ್ದೇನೆ. ಅವೆ ಸಿನಿ ಜರ್ನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬೆಳೆದಿದ್ದಾರೆ.

ಇತ್ತಿಚೆಗೆ ಭಾಮಾ ಹರೀಶ್ ಸುದೀಪ್ ಅವರನ್ನು ಭೇಟಿಯಾಗಿದ್ದರು. ಎಂ ಎನ್ ಕುಮಾರ್ ಪತ್ರ ಕಳುಹಿಸಿದ್ದರು. ಅದಕ್ಕೆ ನಾವೂ ಉತ್ತರ ಕೊಟ್ಟಿದ್ದೇವೆ. ಆದರೂ ಕುಮಾರ್ ಅವರು, ಉತ್ತರ ಕೊಟ್ಟಿಲ್ಲ ಎಂದಿದ್ದಾರೆ. ಕುಮಾರ್ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒತ್ತಡದಲ್ಲಿ ಅವರು ಮಾತನಾಡುವ ರೀತಿ ಬದಲಾಗಿದೆ. ಒಬ್ಬ ನಿರ್ದೇಶಕನನ್ನು ಸುದೀಪ್ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್ ಒಪ್ಪಲಿಲ್ಲ. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್ ಅವರನ್ನು ಭೇಟಿಯಾಗಲು ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *