Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH : ಕೇವಲ 10 ರೂಪಾಯಿ ನಾಣ್ಯಗಳನ್ನು ನೀಡಿ 1.10 ಲಕ್ಷ ರೂ. ಮೌಲ್ಯದ ಬೈಕ್ ಖರೀದಿಸಿದ ತೆಲಂಗಾಣದ ವ್ಯಕ್ತಿ: ವಿಡಿಯೋ ವೈರಲ್

---Advertisement---

ಹೈದರಾಬಾದ್ ಜುಲೈ.09: ಸಾಮಾನ್ಯವಾಗಿ ಜನರು ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಖರೀದಿಸಲು ಆನ್‌ಲೈನ್ ಪೇಮೆಂಟ್ ಮಾಡುತ್ತಾರೆ ಅಥವಾ ಕರೆನ್ಸಿ ನೋಟುಗಳನ್ನು ನೀಡುತ್ತಾರೆ. ಆದರೆ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 1.10 ಲಕ್ಷ ರೂಪಾಯಿ ಮೌಲ್ಯದ ಹೊಸ ಮೋಟಾರ್‌ಸೈಕಲ್ ಅನ್ನು ಕೇವಲ 10 ರೂಪಾಯಿಯ ನಾಣ್ಯಗಳನ್ನು ಕೊಟ್ಟು ಖರೀದಿಸಿದ್ದಾರೆ! ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ವರದಿಗಳ ಪ್ರಕಾರ, ಬೈಕ್ ಖರೀದಿಸಲು ಬಂದ ಗ್ರಾಹಕ ಕರೆನ್ಸಿ ನೋಟುಗಳು ಅಥವಾ ಡಿಜಿಟಲ್ ಪಾವತಿಯನ್ನು ಬಳಸುವ ಬದಲು, 10 ರೂಪಾಯಿ ನಾಣ್ಯಗಳಿಂದ ತುಂಬಿದ್ದ ಚೀಲಗಳನ್ನು ಹಿಡಿದು ಶೋರೂಂಗೆ ಬಂದಿದ್ದನು. ಮೊದಮೊದಲು ಶೋರೂಂ ಸಿಬ್ಬಂದಿ ಗಾಬರಿಯಾದರೂ, ನಂತರ ಈ ಹಣವನ್ನು ಸ್ವೀಕರಿಸಲು ಒಪ್ಪಿಕೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆಟೋಮೊಬೈಲ್ ಶೋರೂಂನ ಸಿಬ್ಬಂದಿ ನೆಲದ ಮೇಲೆ ಕುಳಿತು ಸಾವಿರಾರು ನಾಣ್ಯಗಳನ್ನು ರಾಶಿ ಹಾಕಿ ಅತ್ಯಂತ ತಾಳ್ಮೆಯಿಂದ ಎಣಿಸುತ್ತಿರುವುದನ್ನು ಕಾಣಬಹುದು. ಈ ಅಪರೂಪದ ದೃಶ್ಯವನ್ನು ನೋಡಲು ಶೋರೂಂನಲ್ಲಿ ಇತರ ಗ್ರಾಹಕರು ಸಹ ಮುಗಿಬಿದ್ದಿದ್ದರು. ಒಟ್ಟು 1.10 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳನ್ನು ಪೂರ್ತಿಯಾಗಿ ಎಣಿಸಿ ಮುಗಿಸಿದ ನಂತರವೇ ಗ್ರಾಹಕನಿಗೆ ಬೈಕ್ ಕೀ ಹಸ್ತಾಂತರಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ನಕಲಿ ನಾಣ್ಯಗಳ ಭೀತಿ ಅಥವಾ ಸುಳ್ಳು ವದಂತಿಗಳಿಂದಾಗಿ ವರ್ತಕರು ಮತ್ತು ಸಾರ್ವಜನಿಕರು 10 ರೂಪಾಯಿ ನಾಣ್ಯಗಳನ್ನು ಪಡೆಯಲು ನಿರಾಕರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆದಿರುವ ಈ ಘಟನೆ 10 ರೂ. ನಾಣ್ಯಗಳು ಸಂಪೂರ್ಣವಾಗಿ ಚಲಾವಣೆಯಲ್ಲಿವೆ ಎಂಬ ಸಂದೇಶವನ್ನು ಸಾರಿದೆ.

ಶೋರೂಂ ಸಿಬ್ಬಂದಿಯ ತಾಳ್ಮೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, “ಇದು ಕೇವಲ ಬೈಕ್ ಖರೀದಿಯಲ್ಲ, ನಾಣ್ಯಗಳ ಚಲಾವಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now