ಯುದ್ಧ ಎನ್ನುವುದು ಹುಚ್ಚುತನ.. ಅದನ್ನ ನಿಲ್ಲಿಸಿ : ಪೋಪ್ ಪ್ರಾನ್ಸಿಸ್ ..!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ನಾಗರಿಕರು ಬಲಿಯಾಗುತ್ತಿದ್ದಾರೆ. ದಿನೇ ದಿನೇ ಸಾವು ನೋವು ಹೆಚ್ಚಾಗುತ್ತಿದೆ. ಈ ಯುದ್ಧದಲ್ಲಿ 71 ಮಕ್ಕಳು ಗಾಯಗೊಂಡಿರುವ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ. ಅಷ್ಟೇ ಅಲ್ಲ ರಷ್ಯಾ ಯುದ್ಧದಲ್ಲಿ ಉಕ್ರೇನ್ ನ 364 ನಾಗರಿಕರು ಸಾವನ್ನಪ್ಪಿರುವ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ಇನ್ನು ಉಕ್ರೇನ್ ನಲ್ಲಿ ಗುಂಡಿನ ದಾಳಿಗೆ ಹರ್ಜೋತ್ ಸಿಂಗ್ ಗಾಯಗೊಂಡಿದ್ದರು. ಇದೀಗ ಉಕ್ರೇನ್ ನಿಂದ ಪೊಲೆಂಡ್ ತಲುಪಿದ್ದಾರೆ. ವಿದೆಶಾಂಗ ಇಲಾಖೆ ಅಧಿಕಾರಿಗಳು ಭಾರತಕ್ಕೆ ಕರೆತರುತ್ತಿದ್ದಾರೆ. ಯುದ್ಧದಿಂದಾಗಿ ಸಾಕಷ್ಟು ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಉಕ್ರೇನ್ ನಲ್ಲಿ ರಕ್ತ, ಕಣ್ಣೀರಿನ ನದಿ ಹರಿಯುತ್ತಿದೆ ಪೋಪ್ ಪ್ರಾನ್ಸಿಸ್ ಬೇಸರ ಹೊರ ಹಾಕಿದ್ದಾರೆ. ಇದು ಸೇನಾ ಕಾರ್ಯಾಚರಣೆ ಅಲ್ಲ, ಆದರೆ ಭೀಕರ ಯುದ್ಧ. ಸಾವು ನೋವು ಸಂಭವಿಸುತ್ತಿದೆ. ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದೆ. ಯುದ್ಧ ಎನ್ನುವುದು ಹುಚ್ಚುತನ ಅದನ್ನ ನಿಲ್ಲಿಸಿ ಎಂದಿದ್ದಾರೆ.

ಉಕ್ರೇನ್ ನ ಖಾರ್ಕೀವ್ ನಲ್ಲಿ ರಷ್ಯಾ ವಿಮಾನವನ್ನ ಉಕ್ರೇನ್ ಸೇನೆ ಹೊಡೆದುರುಳಿಸಿದೆ. ಈ ಘಟನೆಯಲ್ಲಿ ರಷ್ಯಾ ಯುದ್ಧ ವಿಮಾನದಲ್ಲಿದ್ದ ಪೈಲೆಟ್ ಸಾವನ್ನಪ್ಪಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.

TAGGED:
Share This Article
Leave a Comment

Leave a Reply

Your email address will not be published. Required fields are marked *