ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಇಂದು ಜಡ್ಜ್ ಮುಂದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ. 57ನೇ ಸೆಷನ್ಸ್ ಕೋರ್ಟ್ ಜಡ್ಜ್ ಇಲ್ಲದ ಕಾರಣ ಇಂದು ಆರೋಪಿಗಳನ್ನು 64ನೇ ಸೆಷನ್ಸ್ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ನಟ ದರ್ಶನ್ ಪರ ವಕೀಲರು ಈ ಕೊಲೆ ಕೆಸಲ್ಲಿ ದರ್ಶನ್ ಅವರನ್ನು ಡಿಸ್ಚಾರ್ಜ್ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಜಡ್ಜ್ ಮುಂದೆ ದರ್ಶನ್ ಕಣ್ಣೀರು ಹಾಕಿದ್ದು, ಕೋರ್ಟ್ ಹೇಳಿದಂತೆ ನನಗೆ ಜೈಲಿನಲ್ಲಿ ಯಾವ ಸೌಲಭ್ಯವನ್ನು ಕಲ್ಪಿಸಿಲ್ಲ. ನೀವೂ ಹೇಳಿದಂತೆ ವಾಕಿಂಗ್ ಅವಕಾಶವನ್ನು ಕೊಟ್ಟಿಲ್ಲ. ಏನೂ ಸೌಲಭ್ಯ ಕೊಟ್ಟಿಲ್ಲ ಸರ್. ವಾಕ್ ಕೂಡ ನೀವೂ ಹೇಳಿದ್ರಿ ಅದು ಕೂಡ 15 ಅಡಿ ಇರುವ ಜಾಗದಲ್ಲಿ ವಾಕ್ ಮಾಡಿಸ್ತಾರೆ. ಅಲ್ಲಿ ಬಿಸಿಲು ಬರುವುದಿಲ್ಲ ಸರ್ ಅಂತ ಜಡ್ಜ್ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದಾರೆ.

ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿಕೆ ಮಾಡಿದೆ. ದರ್ಶನ್ ವಾದ ಪ್ರತಿವಾದದ ವೇಳೆ ಪರಪ್ಪನ ಅಗ್ರಹಾರದ ಪೊಲೀಸರ ಮೇಲೆ ಆರೋಪ ಮಾಡಿದ್ದು, ಬೇಸರವನ್ನು ಹೊರ ಹಾಕಿದ ಪ್ರಸಂಗ ನಡೆದಿದೆ. ಬೆನ್ನು ನೋವು ಮೊದಲಿನಿಂದಲು ಇದ್ದು, ಈಗ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾಗಲೂ ಬೆನ್ನು ನೋವು ಇರುವುದನ್ನ, ಆ ನೋವನ್ನ ಮುಖದಲ್ಲಿಯೇ ವ್ಯಕ್ತಪಡಿಸಿದ್ದರು. ಮುಂದಿನ ವಿಚಾರಣೆಯಷ್ಟರಲ್ಲಾದರೂ ದರ್ಶನ್ ಡಿಮ್ಯಾಂಡ್ ಫುಲ್ ಫಿಲ್ ಮಾಡ್ತಾರಾ ಪೊಲೀಸರು ನೋಡಬೇಕಿದೆ.











