ಪ್ರತಿ ಮಂಗಳವಾರದಂದು ಜಿಲ್ಲಾಧಿಕಾರಿಗಳಿಂದ ತಹಸಿಲ್ದಾರ್ ಕಚೇರಿಗೆ ಭೇಟಿ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ

1 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ ಜ. 23 : ಸರ್ಕಾರದ ಸೂಚನೆಯಂತೆ ಪ್ರತಿ ಮಂಗಳವಾರದಂದು ಒಂದು ತಾಲ್ಲೂಕಿನ ತಹಸಿಲ್ದಾರರ ಕಚೇರಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ.

ಜ. 24 ರ ಮಂಗಳವಾರದಂದು ಚಿತ್ರದುರ್ಗ ತಹಸಿಲ್ದಾರರ ಕಚೇರಿ,

ಜ. 31 ರಂದು ಹೊಳಲ್ಕೆರೆ,

ಫೆಬ್ರವರಿ ತಿಂಗಳಿನ 07 ರಂದು ಹಿರಿಯೂರು,
17 ರಂದು ಚಳ್ಳಕೆರೆ, 21 ರಂದು ಹೊಸದುರ್ಗ, 28 ರಂದು ಮೊಳಕಾಲ್ಮೂರು ತಹಸಿಲ್ದಾರರ ಕಚೇರಿಗೆ ಭೇಟಿ ನೀಡುವರು.

ಮಾರ್ಚ್ 07 ರಂದು ಚಿತ್ರದುರ್ಗ,
14 ರಂದು ಹೊಳಲ್ಕೆರೆ,
21 ರಂದು ಹಿರಿಯೂರು,
28 ರಂದು ಚಳ್ಳಕೆರೆ ತಹಸಿಲ್ದಾರರ ಕಚೇರಿಗೆ ಭೇಟಿ ನೀಡುವರು.

ಏಪ್ರಿಲ್ ತಿಂಗಳಲ್ಲಿ 11 ರಂದು ಹೊಸದುರ್ಗ, 18 ರಂದು ಮೊಳಕಾಲ್ಮೂರು,
25 ರಂದು ಚಿತ್ರದುರ್ಗ.

ಮೇ ತಿಂಗಳಿನಲ್ಲಿ 02 ರಂದು ಹೊಳಲ್ಕೆರೆ,
09 ರಂದು ಹಿರಿಯೂರು,
16 ರಂದು ಚಳ್ಳಕೆರೆ,
23 ರಂದು ಹೊಸದುರ್ಗ,
30 ರಂದು ಮೊಳಕಾಲ್ಮೂರು ತಹಸಿಲ್ದಾರರ ಕಚೇರಿ.

ಜೂನ್ ತಿಂಗಳಿನಲ್ಲಿ 06 ರಂದು ಚಿತ್ರದುರ್ಗ, 13 ರಂದು ಹೊಳಲ್ಕೆರೆ,
20 ರಂದು ಹಿರಿಯೂರು,
27 ರಂದು ಚಳ್ಳಕೆರೆ ತಹಸಿಲ್ದಾರರ ಕಚೇರಿಗೆ ಭೇಟಿ ನೀಡುವರು.

ಸಾರ್ವಜನಿಕರು ತಮ್ಮ ತೊಂದರೆ, ಅಹವಾಲುಗಳನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *