ಮೃತ ನೇಹಾ ಮನೆಗೆ ಮುಸ್ಲಿಂ ಮುಖಂಡರ ಭೇಟಿ : ನಿರಂಜನ ದೇಶಪಾಂಡೆಗೆ ಸಾಂತ್ವನ

suddionenews
1 Min Read

ಹುಬ್ಬಳ್ಳಿ: ನೇಹಾ ಎಂಬ ಎಂಸಿಎ ವಿದ್ಯಾರ್ಥಿನಿಯನ್ನು ಫಯಾಜ್ ನಿನ್ನೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೋರಾಟಗಳು ಕೂಡ ನಡೆದಿವೆ. ಇದೀಗ ಮುಸ್ಲಿಂ ಮುಖಂಡರು ಮೃತ ನೇಹಾ ಮನೆಗೆ ಭೇಟಿ ನೀಡಿ, ನಿರಂಜನ್ ಹಿರೇಮಠ ಅವರಿಗೆ ಸಾಂತ್ವನ ಹೇಳಿ ಬಂದಿದ್ದಾರೆ.

ಮುಸ್ಲಿಂ ಮುಖಂಡರು ಭೇಟಿ ನೀಡಿದ್ದು, ನಿನ್ನೆಯೇ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಭೇಟಿ ನೀಡಲು ಧೈರ್ಯ ಸಾಕಾಗಲಿಲ್ಲ. ಜೊತೆಗೆ ಸಮಾಧಾನ ಹೇಳುವ ಮನಸ್ಸು ಇರಲಿಲ್ಲ ಎಂದಿದ್ದಾರೆ. ಇದೇ ವೇಳೆ ನೇಹಾ ಅಣ್ಣ ನಿರಂಜನ್ ಮಾತನಾಡಿ, ಯಾರೋ ಮಾಡಿದ ತಪ್ಪಿಗೆ ನಾನ್ಯಾವಾಗ ನಿಮ್ಮ ಸಮುದಾಯದ ಬಗ್ಗೆ ಮಾತನಾಡಿದೆ. ಆಕೆ ನಮ್ಮ ಮನೆ ಮಹಾಲಕ್ಷ್ಮಿ ಇದ್ದಂತೆ. ಅವಳನ್ನು ಯಾರೋ ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.

ನಿರಂಜನ್ ಕೂಡ ಮುಸ್ಲಿಂ ಮುಖಂಡರೊಂದಿಗೆ ಬಾಂಧವ್ಯದಿಂದಾನೆ ಇದ್ದು, ಮನೆಗೆ ಬಂದ ಮುಖಂಡರು, ನೇಹಾರನ್ನು ಯಾರೂ ಟಾರ್ಗೆಟ್ ಮಾಡಿದ್ದಾರೋ ಅವರಿಗೆ ಒಳ್ಳೆಯದು ಆಗಲ್ಲ. ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೀವಿ. ಕೆಟ್ಟದು ಮಾಡಿದವ್ರಿಗೆ ದೇವರು ಕೆಟ್ಟದ್ದೇ ಮಾಡುತ್ತಾನೆ. ನಾನು ನಿರಂಜನ್ ಡಿಗ್ರಿವರೆಗೂ ಒಟ್ಟಿಗೆ ಓದಿದ್ದೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *