Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಐಪಿಎಲ್ ನಿಂದ ಹೊರಬಿದ್ದ ಮೇಲೆ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ ವಿರಾಟ್ ಕೊಹ್ಲಿ

Facebook
Twitter
Telegram
WhatsApp

 

ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಟೀಂ ಆಡಿದ್ದು ನೋಡಿದ್ರೆ ಖಂಡಿತ ಕಪ್ ಗೆದ್ದು ತಂದೇ ತರುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಮೂಡಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತು, ಮನೆ ಕಡೆಯ ದಾರಿ ಹಿಡಿಯಿತು. ಅಭಿಮಾನಿಗಳಿಗೆ ಬೇಸರವಾದರೂ ತಮ್ಮ ಆರ್ಸಿಬಿ ತಂಡವನ್ನು ಪ್ರಶಂಸಿದರೆ ಬಿಡಲಿಲ್ಲ. ಕೊನೆ ಗಳಿಗೆಯಲ್ಲೂ ಚೆನ್ನಾಗಿ ಆಡಿದ್ರಿ ಎಂದು ಹೊಗಳಿದ್ದರು. ಇದೀಗ ಐಪಿಎಲ್ ಸೋತ ಮೂರು ದಿನಗಳ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿರುವ ವಿರಾಟ್ ಕೊಹ್ಲಿ, ಯಾವಾಗಲೂ ನಮ್ಮನ್ನು ಪ್ರೀತಿಸುವ, ಪ್ರಶಂಶಿಸುವ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಐಪಿಎಲ್ ನಲ್ಲಿ ತಮ್ಮ ಟೀಂ ಫೋಟೋ ಹಂಚಿಕೊಂಡು ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ್ದಾರೆ. ಅಭಿಮಾನಿಗಳೆಲ್ಲಾ ಈ ಪೋಸ್ಟ್ ಗೆ ಹಾರ್ಟ್ ನೀಡಿ, ಸದಾ ನಿಮ್ಮ ಬೆಂಬಲಕ್ಕೆ ಇದ್ದೀವಿ. ಮುಂದಿನ ಸಲ ಖಂಡಿತ ಕಪ್ ನಮ್ಮದೆ ಎಂದಿದ್ದಾರೆ.

ಸತತ 16 ವರ್ಷ.. ಆರ್ಸಿಬಿ ಮಾತ್ರ ಕಪ್ ಗೆಲ್ಲಲಿಲ್ಲ. ಈ ಬೇಸರ ಆರ್ಸಿಬಿ ತಂಡಕ್ಕೂ ಇದೆ ಎಂಬುದಾಗಿಯೇ ಎಲ್ಲರೂ ಭಾವಿಸಿದ್ದಾರೆ. ಈ ಬಾರಿ ಮಹಿಳಾ ಮಣಿಗಳೇ ಕಪ್ ಹೊಡೆದುಕೊಂಡು ಬಂದಿದ್ದಾರೆ. ಪುರುಷರು ಕೂಡ ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದರು. ಆದರೆ ಪ್ಲೇ ಆಫ್ ಗೆ ಬಂದು ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಆಗಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೂ ಭರವಸೆಯನ್ನಿಟ್ಟುಕೊಂಡು ಮತ್ತೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಈ ಬಾರಿಯ ಸೀಸನ್ ನಲ್ಲಿ ಕೊಹ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತರುಣ್ ಸುಧೀರ್ & ಸೋನಲ್ ಮದುವೆ ಆಗ್ತಾ ಇರೋದು ಸತ್ಯ : ಮಾಲತಿ ಸುಧೀರ್ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಗಾಂಧಿನಗರದ ಮೂಲೆ‌ ಮೂಲೆಯಲ್ಲೂ ತರುಣ್ ಸುಧೀರ್ ಅವರ ಮದುವೆಯದ್ದು ಸದ್ದು. ತರುಣ್ ಹಾಗೂ ನಟಿ ಸೋನಲ್ ಮದುವೆಯಾಗ್ತಾ ಇದ್ದಾರಂತೆ ಎಂಬ ಗುಸುಗುಸು. ಮಹಾನಟಿ ವೇದಿಕೆಯಲ್ಲೂ ಈ ಟಾಪಿಕ್ ಬಂದಾಗ ತರುಣ್

ಸಿಎಂ ಪತ್ನಿ ಹೆಸರಿಗೆ 14 ಮೂಡಾ ಸೈಟ್ ಗಳು : ಸಿದ್ದರಾಮಯ್ಯ ಹೇಳಿದ್ದೇನು..?

  ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಮೂಡಾ ಸೈಟುಗಳನ್ನು ಮಾಡಲಾಗಿದೆ ಎಂಬುದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಐ ಕಾರ್ಯಕರ್ತ ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದಿದ್ದಾರೆ. ಜೊತೆಗೆ ಸಿಎಂ

ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ : ಕಾಲ್ತುಳಿತಕ್ಕೆ 80 ಕ್ಕೂ ಹೆಚ್ಚು ಮಂದಿ ಸಾವು…!

ಸುದ್ದಿಒನ್, ಜುಲೈ. 02 : ನವದೆಹಲಿ: ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 87 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೋಲೆ ಬಾಬಾರವರ ಸತ್ಸಂಗ

error: Content is protected !!