Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯ್ ರಾಘವೇಂದ್ರ – ಸ್ಪಂದನಾಗೆ ಮದುವೆ ವಾರ್ಷಿಕೋತ್ಸವದ ದಿನ : ಪತ್ನಿ ಇಲ್ಲದ ನೋವಲ್ಲಿ ಚಿನ್ನಾರಿ ಮುತ್ತ ಭಾವುಕ ಪೋಸ್ಟ್…!

---Advertisement---

 

ಬೆಂಗಳೂರು: ಹಾರ್ಟ್ ಅಟ್ಯಾಕ್ ನಿಂದಾಗಿ ಸ್ಪಂದನಾ ವಿದೇಶದಲ್ಲಿ ನಿಧನರಾದರು. ಬೆಂಗಳೂರಿಗೆ ಮೃತದೇಹ ತಂದು ಎಲ್ಲಾ ಕಾರ್ಯಗಳನ್ನು ಮುಗಿಸಿದ್ದು ಆಗಿದೆ. ಸ್ಪಂದನಾ, ವಿಜಯ್ ರಾಘವೇಂದ್ರ ಅವರನ್ನ ತುಂಬಾ ಆವರಿಸಿಬಿಟ್ಟಿದ್ದಾರೆ. ಪತ್ನಿಯ ಅಗಲಿಕೆಯ ನೋವಲ್ಲಿಯೇ ಹನ್ನೊಂದನೇ ದಿನದ ಕಾರ್ಯ ಮುಗಿದ ಮೇಲೆ ಒಂದು ಪೋಸ್ಟ್ ಹಾಕಿದ್ದರು. ನಾನೆಂದು ನಿನ್ನವ.. ಕೇವಲ ನಿನ್ನವ ಎಂದು. ಇಂದು ವಿವಾಹ ವಾರ್ಷಿಕೋತ್ಸವದ ದಿನ. ಆದ್ರೆ ಅದನ್ನ ಸಂಭ್ರಮಿಸುವ ಸಂತಸ ವಿಜಯ್ ಗಿಲ್ಲ. ವಿಧಿ ಸಂತಸಕ್ಕೂ ಮುನ್ನವೇ ಸ್ಪಂದನಾರನ್ನ ಕರೆದುಕೊಂಡು ಹೋಗಿದೆ.

ಪತ್ನಿ ಎಂದರೆ ಅದೆಷ್ಟು ಪ್ರೀತಿ ಅನ್ನೋದನ್ನ ವಿಜಯ್ ರಾಘವೇಂದ್ರ ಅದಾಗಲೇ ಸಾಕಷ್ಟು ಸಲ ಹೇಳಿದ್ದಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೂನು ಅವರಿಬ್ಬರ ನಡುವೆ ಅದೆಷ್ಟು ಅಗಾಧ ಪ್ರೀತಿ ಇತ್ತು ಅನ್ನೋದು ತಿಳಿಯುತ್ತೆ. ಇಬ್ಬರ ಪ್ರೀತಿ ಸಂಕೇತವಾಗಿ ಮುದ್ದಾದ ಮಗ ಶೌರ್ಯನಿದ್ದಾನೆ. ಶೌರ್ಯನ ಬಗ್ಗೆ ಗಂಡ – ಹೆಂಡತಿಗೆ ಅಪಾರವಾದ ಕನಸಿತ್ತು. ಆ ಕನಸಿಗೆ ಈಗ ವಿಜಯ್ ರಾಘವೇಂದ್ರ ಒಬ್ಬರೇ ಹೆಗಲ ಕೊಡಬೇಕಿದೆ. ಸ್ಪಂದನಾ ಇಂದು ಇದ್ದಿದ್ದರೆ, 16ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಅದ್ದೂರಿಯಾಗಿ ಆಚರಿಸುತ್ತಾ ಇದ್ದರು. ಸ್ಪಂದನಾ ನೆನಪಲ್ಲಿ ವಿಜಯ್ ರಾಘವೇಂದ್ರ ಭಾವುಕರಾಗುವಂತ ಪೋಸ್ಟ್ ಹಂಚಿಕೊಂಡಿದ್ದಾರೆ.

https://www.instagram.com/reel/CwZYJmtM0yV/?igshid=MzRlODBiNWFlZA==

“ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲ್ಲಿ. ಎಲ್ಲೆ ಮೀರಿ ಒಲವ ನೀಡಿದೆ‌ ಎದೆಯ ಅಂತರಾಳದಲಿ. ಬದುಕನ್ನು ಕಟ್ಟಿ ಸರ್ವಸ್ವವಾದೆ. ಉಸಿರಲಿ ಬೆರೆತು ಜೀವಂತವಾದೆ. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು. ಮರೆಯದೆ, ತೊರೆಯದೆ ಎದೆಗೊತ್ತಿ ಪ್ರೀತಿಸುವೆ. ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು” ಎಂದು ತಮ್ಮದೇ ಧ್ವನಿಯಲ್ಲಿ ಒಂದು ವಿಡಿಯೋ ಮಾಡಿ ಹಾಕಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...