Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಗೆ ಶಾಕ್ : ಎಷ್ಟು ಸೀಟು ಬರಲಿದೆ ರಾಜ್ಯದಲ್ಲಿ..?

Facebook
Twitter
Telegram
WhatsApp

ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಎಕ್ಸಿಟ್ ಪೋಲ್ ಸಾಕಷ್ಟು ಕುತೂಹಲವನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಎಕ್ಸಿಟ್ ಪೋಲ್ ನಿಜವಾಗಿದೆ, ಇನ್ನು ಕೆಲವೊಮ್ಮೆ ಸಂಪೂರ್ಣ ಸತ್ಯವಾಗಿಲ್ಲ. ಈ ಬಾರಿಯೂ ಎಕ್ಸಿಟ್ ಪೋಲ್ ವರದಿ ರಿಲೀಸ್ ಆಗಿದ್ದು, ಕಾಂಗ್ರೆಸ್ ಗೆ ಶಾಕ್ ನೀಡಿದೆ.

ಇಂಡಿಯಾ ಟುಡೇ ರಿಲೀಸ್ ಮಾಡಿರುವ ವರದಿ ಪ್ರಕಾರ: ಬಿಜೆಪಿ – 20-22 ಸೀಟು ತನ್ನದಾಗಿಸಿಕೊಳ್ಳಲಿದೆ. ಕಾಂಗ್ರೆಸ್-3-5 ಸೀಟು ಗೆಲ್ಲಲಿದೆ. ಜೆಡಿಎಸ್ – 2-3 ಸೀಟು ಗೆಲ್ಲಲಿದೆ ಎನ್ನಲಾಗಿದೆ.

ಇನ್ನು ಸಿ ವೋಟರ್ ಸಮೀಕ್ಷೆಯ ಪ್ರಕಾರ, ಬಿಜೆಪಿ – 21-22 ಸೀಟು, ಕಾಂಗ್ರೆಸ್ – 3-5, ಜೆಡಿಎಸ್ -1-3 ಸೀಟು ಗೆಲ್ಲಲಿದೆಯಂತೆ.

ಇಂಡಿಯಾ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ : 18-22 ಸೀಟು, ಕಾಂಗ್ರೆಸ್ : 4-8 ಸೀಟು, ಜೆಡಿಎಸ್ : 2 ಸೀಟು ಗೆಲ್ಲಲಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೇ ಶುರುವಾಗಿದೆ. ಇನ್ನೆರಡು ದಿನ ಕಳೆದರೆ ಫಲಿತಾಂಶದ ಟೆನ್ಶನ್ ಶುರುವಾಗಲಿದೆ. ಜೂನ್ 4 ಅಂದ್ರೆ ಮಂಗಳವಾರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬರಲಿದೆ. ನರೇಂದ್ರ ಮೋದಿಯವರೇ ಹ್ಯಾಟ್ರಿಕ್ ಹೊಡೆಯುತ್ತಾರಾ..? ಮತದಾರ ಪ್ರಭುಗಳು ಮತ್ತೆ ಮೋದಿಗೆ ಜೈ ಎಂದಿದ್ದಾರಾ..? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ಇದರ ಜೊತೆಗೆ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆಗೆ ಮಿತ್ರ ಪಕ್ಷಗಳು ಒಂದಾಗಿದ್ದವು. ಆ ಫಲಿತಾಂಶದ ವಿಚಾರವೂ ಹೊರ ಬೀಳಲಿದೆ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಹದಿನೈದು ಸೀಟುಗಳನ್ನಾದರೂ ಪಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಎಕ್ಸಿಟ್ ಪೋಲ್ ವರದಿ ಬೇರೆಯದ್ದನ್ನೇ ಹೇಳುತ್ತಿದೆ. ಜೂನ್ 4ಕ್ಕೆ ಇದಕ್ಕೆಲ್ಲ ಉತ್ತರ ಸಿಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ವ್ಯಾಪಾರಸ್ಥರಿಗೆ ಕೃಷಿಕರಿಗೆ ಉತ್ತಮ ಕಾಲಾವಧಿ, ಆದರೆ ಈ ರಾಶಿಗಳಿಗೆ ಕುಜ ಕೇತು ಗೃಹಗಳಿಂದ ಒಂದು ರೀತಿಯ ಆತಂಕ

ಈ ರಾಶಿಯ ವ್ಯಾಪಾರಸ್ಥರಿಗೆ ಕೃಷಿಕರಿಗೆ ಉತ್ತಮ ಕಾಲಾವಧಿ, ಆದರೆ ಈ ರಾಶಿಗಳಿಗೆ ಕುಜ ಕೇತು ಗೃಹಗಳಿಂದ ಒಂದು ರೀತಿಯ ಆತಂಕ. ಭಾನುವಾರ- ರಾಶಿ ಭವಿಷ್ಯ ಜುಲೈ-7,2024 ಸೂರ್ಯೋದಯ: 05:51, ಸೂರ್ಯಾಸ್ತ : 06:50 ಶಾಲಿವಾಹನ

INDIA Vs ZIMBABWE : 13 ರನ್‌ಗಳ ಅಂತರದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸೋಲು

  ಸುದ್ದಿಒನ್ : ಟಿ20 ವಿಶ್ವಕಪ್ ಗೆದ್ದ ಭಾರತ ಆ ಬಳಿಕ ಮೊದಲ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ.  ಜಿಂಬಾಬ್ವೆ ವಿರುದ್ಧ 13 ರನ್‌ಗಳಿಂದ ಸೋತಿತು. ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್

ಹೆಚ್ಡಿಕೆ ಜನತಾ ದರ್ಶನಕ್ಕೆ 3 ಸಾವಿರ ಜನ ಬಂದಿದ್ರು..ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನ ಕೊಡಿಸಲಿ ನೋಡೋಣಾ : ಚೆಲುವರಾಯಸ್ವಾಮಿ

ಬೆಂಗಳೂರು: ಮೊನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜನತಾ ದರ್ಶನ ನಡೆಸಿದ್ದರು‌. ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಸರ್ಕಾರದ ಮೇಲೆ ಕಿಡಿಕಾರಿದ್ದರು. ಇದೀಗ ಜನತಾ ದರ್ಶನದ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರು ಆಕ್ರೋಶ

error: Content is protected !!