Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೀವನ ಸಂಗಾತಿಯನ್ನು ಪರಿಚಯಿಸಿದ ‘ಕನ್ನಡತಿ’ ರಂಜಿನಿ ರಾಘವನ್ : ಯಾರು ಆತ..?

Facebook
Twitter
Telegram
WhatsApp

ಕನ್ನಡತಿ ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಗೆದ್ದವರು ರಂಜಿನಿ ರಾಘವನ್. ಸಿನಿಮಾಗಳ ಮೂಲಕವೂ ಎಲ್ಲರ ಅಚ್ಚುಮೆಚ್ಚಿನ ನಟಿ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಅದುವೆ ಮದುವೆಯಾಗುವ ಬೆಸ್ಟ್ ಫ್ರೆಂಡ್ ಅನ್ನು ಪರಿಚಯಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಅವರ ಹುಡುಗನ ಹೆಸರೊಂದನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಸದ್ಯ ಈ ಜೋಡಿ ಎಲ್ಲೆಡೆ ವೈರಲ್ ಆಗುತ್ತಿದೆ.

ರಂಜನಿ ರಾಘವನ್ ತಮ್ಮ ಬಹುಕಾಲದ ಗೆಳೆಯ ಸಾಗರ್ ಭಾರಧ್ವಜ್ ಕೈ ಹಿಡಿಯುತ್ತಿದ್ದಾರೆ. ಅವರ ಪ್ರೀತಿಯನ್ನು ಇನ್ಸ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಜೊತೆಗಿರುವ ಫೋಟೋ ಹಾಕಿ, ಕನ್ನಡಿಯಲ್ಲಿರುವ ವಸ್ತುಗಳು ಗೋಚರಿಸುವುದಕ್ಕಿಂತ ಹತ್ತಿರದಲ್ಲಿವೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನನ್ ಹುಡುಗ.. ಲೈಫ್ ಪಾಟ್ನರ್.. ಬೆಸ್ಟ್ ಫ್ರೆಂಡ್ ಅಂತಾನೂ ಕ್ಯಾಪ್ಶನ್ ಹಾಕಿದ್ದಾರೆ. ಈ ಹಿಂದೆ ರಂಜಿನಿ ರಾಘವನ್ ಅವರೇ ಬೆಸ್ಟ್ ಫ್ರೆಂಡ್ ಮುಂದೆ ಪಾಟ್ನರ್ ಆಗುವ ಬಗ್ಗೆ ಹೇಳಿದ್ದರು. ಬೆಸ್ಟ್ ಫ್ರೆಂಡ್ ಗೆ ಎಲ್ಲವೂ ಗೊತ್ತಿರುತ್ತೆ ಅವರೇ ಪಾಟ್ನರ್ ಆದಾಗ ಚೆನ್ನಾಗಿರುತ್ತೆ ಎಂದಿದ್ದರು. ಇದೀಗ ಅವರ ಬೆಸ್ಟ್ ಫ್ರೆಂಡ್ ಸಾಗರ್ ಭಾರದ್ವಾಜ್ ಅವರನ್ನೇ ಮದುವೆಯಾಗುತ್ತಿದ್ದಾರೆ.

ಅಷ್ಟಕ್ಕೂ ಸಾಗರ್ ಭಾರಧ್ವಾಜ್ ಯಾರು..? ಏನು ಮಾಡ್ತಾ ಇದಾರೆ ಅಂತ ನೋಡೋದಾದ್ರೆ, ವೃತ್ತಿಯಲ್ಲಿ ಅಥ್ಲೆಟ್ ಎನ್ನಲಾಗುತ್ತಿದೆ. ರನ್ನರ್, ಸೈಕಲಿಸ್ಟ್, ಬೈಕರ್ ಕೂಡ ಎಂಬ ಮಾಹಿತಿ ಇದೆಮ ಸದ್ಯ ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಪ್ರೈವೇಟ್ ನಲ್ಲಿ ಇದೆ. ಸದ್ಯ ಅಭಿಮಾನಿಗಳು ಇಬ್ಬರ ಫೋಟೋಗಳಿಗೆ ಒಳ್ಳೊಳ್ಳೆ ಕಮೆಂಟ್ ಗಳನ್ನ ಹಾಕುತ್ತಿದ್ದಾರೆ. ವಿಶ್ ಮಾಡುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!