Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಾವೇರಿ | ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.88.1 : 77 ಶಾಲೆಗಳ ಫಲಿತಾಂಶ ನೂರಕ್ಕೆ ನೂರು

Facebook
Twitter
Telegram
WhatsApp

ಹಾವೇರಿ:(ಮೇ.19):  ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ.88.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇಬ್ಬರು ವಿದ್ಯಾರ್ಥಿಗಳು  625ಕ್ಕೆ 625 ಅಂಕಗಳನ್ನು ಪಡೆದಿರುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ವರ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 23,019 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 20,274 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಅದರಲ್ಲಿ 9,519 ಬಾಲಕರು  ಹಾಗೂ 10,755 ಬಾಲಕಿಯರು ಸೇರಿ ಶೇ.88.1 ರಷ್ಟು ಫಲಿತಾಂಶ ಲಭಿಸಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು 37,  ಅನುದಾನ ರಹಿತ 30 ಶಾಲೆಗಳು ಹಾಗೂ ಅನುದಾನಿತ 10 ಶಾಲೆಗಳು ಸೇರಿ 77 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ.

ಬ್ಯಾಡಗಿ ತಾಲೂಕಿನಲ್ಲಿ  888 ಬಾಲಕರು ಹಾಗೂ 1023 ಬಾಲಕಿಯರು ಸೇರಿ 1911 (ಶೇ.87.7)ವಿದ್ಯಾರ್ಥಿಗಳು,

ಹಾನಗಲ್ ತಾಲೂಕಿನಲ್ಲಿ 1436 ಬಾಲಕರು ಹಾಗೂ 1798 ಬಾಲಕಿಯರು ಸೇರಿ 3234(ಶೇ.85.4) ವಿದ್ಯಾರ್ಥಿಗಳು,

ಹಾವೇರಿ ತಾಲೂಕಿನಲ್ಲಿ 1746 ಬಾಲಕರು ಹಾಗೂ 1841 ಬಾಲಕಿಯರು ಸೇರಿ 3587(ಶೇ.90.1) ವಿದ್ಯಾರ್ಥಿಗಳು,

ಹಿರೇಕೆರೂರ ತಾಲೂಕಿನಲ್ಲಿ 1364 ಬಾಲಕರು ಹಾಗೂ 1595 ಬಾಲಕಿಯರು ಸೇರಿ 2959(ಶೇ.88.5) ವಿದ್ಯಾರ್ಥಿಗಳು,

ರಾಣೇಬೆನ್ನೂರ ತಾಲೂಕಿನಲ್ಲಿ 1930 ಬಾಲಕರು ಹಾಗೂ 2053 ಬಾಲಕಿಯರು ಸೇರಿ 3983(ಶೇ.87.6) ವಿದ್ಯಾರ್ಥಿಗಳು,

ಸವಣೂರ ತಾಲೂಕಿನಲ್ಲಿ 943 ಬಾಲಕರು ಹಾಗೂ 1021 ಬಾಲಕಿಯರು ಸೇರಿ 1964(ಶೇ.88.1) ವಿದ್ಯಾರ್ಥಿಗಳು,

ಶಿಗ್ಗಾಂವ ತಾಲೂಕಿನಲ್ಲಿ 1212 ಬಾಲಕರು ಹಾಗೂ 1424 ಬಾಲಕಿಯರು ಸೇರಿ 2636 (89.4) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!