Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಾವೇರಿ | ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.88.1 : 77 ಶಾಲೆಗಳ ಫಲಿತಾಂಶ ನೂರಕ್ಕೆ ನೂರು

Facebook
Twitter
Telegram
WhatsApp

ಹಾವೇರಿ:(ಮೇ.19):  ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ.88.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇಬ್ಬರು ವಿದ್ಯಾರ್ಥಿಗಳು  625ಕ್ಕೆ 625 ಅಂಕಗಳನ್ನು ಪಡೆದಿರುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ವರ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 23,019 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 20,274 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಅದರಲ್ಲಿ 9,519 ಬಾಲಕರು  ಹಾಗೂ 10,755 ಬಾಲಕಿಯರು ಸೇರಿ ಶೇ.88.1 ರಷ್ಟು ಫಲಿತಾಂಶ ಲಭಿಸಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು 37,  ಅನುದಾನ ರಹಿತ 30 ಶಾಲೆಗಳು ಹಾಗೂ ಅನುದಾನಿತ 10 ಶಾಲೆಗಳು ಸೇರಿ 77 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ.

ಬ್ಯಾಡಗಿ ತಾಲೂಕಿನಲ್ಲಿ  888 ಬಾಲಕರು ಹಾಗೂ 1023 ಬಾಲಕಿಯರು ಸೇರಿ 1911 (ಶೇ.87.7)ವಿದ್ಯಾರ್ಥಿಗಳು,

ಹಾನಗಲ್ ತಾಲೂಕಿನಲ್ಲಿ 1436 ಬಾಲಕರು ಹಾಗೂ 1798 ಬಾಲಕಿಯರು ಸೇರಿ 3234(ಶೇ.85.4) ವಿದ್ಯಾರ್ಥಿಗಳು,

ಹಾವೇರಿ ತಾಲೂಕಿನಲ್ಲಿ 1746 ಬಾಲಕರು ಹಾಗೂ 1841 ಬಾಲಕಿಯರು ಸೇರಿ 3587(ಶೇ.90.1) ವಿದ್ಯಾರ್ಥಿಗಳು,

ಹಿರೇಕೆರೂರ ತಾಲೂಕಿನಲ್ಲಿ 1364 ಬಾಲಕರು ಹಾಗೂ 1595 ಬಾಲಕಿಯರು ಸೇರಿ 2959(ಶೇ.88.5) ವಿದ್ಯಾರ್ಥಿಗಳು,

ರಾಣೇಬೆನ್ನೂರ ತಾಲೂಕಿನಲ್ಲಿ 1930 ಬಾಲಕರು ಹಾಗೂ 2053 ಬಾಲಕಿಯರು ಸೇರಿ 3983(ಶೇ.87.6) ವಿದ್ಯಾರ್ಥಿಗಳು,

ಸವಣೂರ ತಾಲೂಕಿನಲ್ಲಿ 943 ಬಾಲಕರು ಹಾಗೂ 1021 ಬಾಲಕಿಯರು ಸೇರಿ 1964(ಶೇ.88.1) ವಿದ್ಯಾರ್ಥಿಗಳು,

ಶಿಗ್ಗಾಂವ ತಾಲೂಕಿನಲ್ಲಿ 1212 ಬಾಲಕರು ಹಾಗೂ 1424 ಬಾಲಕಿಯರು ಸೇರಿ 2636 (89.4) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್ : ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಶಿವಮೊಗ್ಗ: ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಭರ್ಜರಿ ಮತಯಾಚನೆ ನಡೆಸುತ್ತಿವೆ. ರಾಹುಲ್ ಗಾಂಧಿ ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದು, ಗೀತಾ ಶಿವ ರಾಜ್‍ಕುಮಾರ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ

error: Content is protected !!