Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮಿತ್ ಶಾ ಮಠಕ್ಕೆ ಬಂದ್ರು, ಹೆಲಿಕಾಪ್ಟರ್ ಹತ್ತಿ ಹೋದ್ರು.. ಭಾರತ ರತ್ನ ಪ್ರಶಸ್ತಿ ಎಲ್ಲಿ : ವಾಟಾಳ್ ನಾಗರಾಜ್ ಪ್ರಶ್ನೆ

Facebook
Twitter
Telegram
WhatsApp

ರಾಮನಗರ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಬಗ್ಗೆ ವಾಟಾಳ್ ನಾಗರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನು ಆಗುತ್ತಾ ಇದೆ ಅಂತ ಯಾರು ಊಹಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ನಾಲ್ಕು ಜನ ಮುಖಂಡರು ಅವರು ಯಾವ ಮೂಲೆಯಲ್ಲಿ ಹೇಳಿದ್ರೂನು ಅವರದ್ದು ಪವಿತ್ರ ಅಂತ ತೀರ್ಮಾನವಾಗಿದೆ. ನಾನು ಬಹಳ ಗಮನಿಸ್ತಾ ಇದ್ದೀನಿ ಎಂದಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಅಮಿತ್ ಶಾ ಬಂದಿದ್ದರು. ಯಾಕೆ ಬಂದರು ಅಲ್ಲಿಗೆ. 115ನೇ ಪುಣ್ಯ ದಿನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆಯ್ತು ಬಂದ್ರಿ ನೀವೂ ಅಲ್ಲಿ ಗಂಗಾ ಇಲ್ಲಿ ಸಿದ್ದಗಂಗಾ ಅಂತ ಹೇಳಿ ಹೆಲಿಕಾಪ್ಟರ್ ಹತ್ತಿ ಹೋಗ್ಬಿಟ್ರಿ. ವ್ಯವಸ್ಥೆ ಮಾಡಿದ್ದವರು ಸಂತೋಷವಾಗಿ ಶಬ್ಬಾಶ್ ಗಿರಿ ಕೊಟ್ಡಿದ್ದಾರೆ. ಮುಂದಿನದಲ್ಲಿ ಶಾ ಅವರು ನಾವೂ ಹೇಳಿದಂಗೆ ಕೇಳ್ತಾರೆ ಅನ್ನೋದು ಖಾತ್ರಿ ಆಗೋಯ್ತು.

ನಾನು ಕೇಳೋದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಯಾಕೆ ಕೊಡಲಿಲ್ಲ. ಕಾರಣ ಏನು. ಅಮಿತ್ ಶಾ ಬಂದ್ರು. ಕೇಂದ್ರದ ಗೃಹ ಮಂತ್ರಿ. ಅವ್ರು ಯಾಕೆ ಹೇಳಲಿಲ್ಲ. ಬರೀ ಸಮಾರಂಭಕ್ಕಷ್ಟೆ ಸೀಮಿತವಾ. ಸಮಾರಂಭ ಮಾಡಿ ಶಬ್ಬಾಶ್ ಗುರಿ ತೆಗೆದುಕೊಳ್ಳೋಕೆ ಮಾತ್ರ ಸೀಮಿತವಾ.. ಬಿಜೆಒಇ ಮುಖಂಡರುಗಳು ನಿಜವಾಗಲೂ ಮಾನ ಮರ್ಯಾದೆ ಗೌರವ ಇದ್ದಿದ್ದರೆ ಭದ್ರವಾಗಿ ಕೇಂದ್ರಸ ರ್ಕಾರದ ಮೇಲೆ ಒತ್ತಡ ಹೇರಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸಬೇಕಿತ್ತು. ಮಠದ ಆಶೀರ್ವಾದ ಬೇಕು, ಸಮಾರಂಭ ಬೇಕು ಆದರೆ ಭಾರತ ರತ್ನ ಯಾಕೆ ಕೊಡಿಸಲಿಲ್ಲ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಸಾಕಷ್ಡು ಜನರಿಗೆ ಭಾರತ ರತ್ನ ಕೊಟ್ಟಿದೆ. ಆದರೇ ಶ್ರೀಗಳಿಗೆ ಯಾಕೆ ಕೊಡುತ್ತಿಲ್ಲ. ಆ ಬಗ್ಗೆ ಕೇಂದ್ರ ಸರ್ಕಾರ ಬಾಯಿ ಬಿಡಬೇಕು. ಇಲ್ಲ ಅಂದ್ರೆ ಬಿಜೆಪಿ ಮುಖಂಡರು ಯಾರ್ ಯಾರಿದ್ದೀರಿ ನೀವೂ ರಾಜೀನಾಮೆ ಕೊಡಿ. ಭಾರತ ರತ್ನ ಕೊಡದೆ ಇರುವ ಕೇಂದ್ರ ಸರ್ಕಾರದ ಧೋರಣೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!