Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮಿತ್ ಶಾ ಮಠಕ್ಕೆ ಬಂದ್ರು, ಹೆಲಿಕಾಪ್ಟರ್ ಹತ್ತಿ ಹೋದ್ರು.. ಭಾರತ ರತ್ನ ಪ್ರಶಸ್ತಿ ಎಲ್ಲಿ : ವಾಟಾಳ್ ನಾಗರಾಜ್ ಪ್ರಶ್ನೆ

Facebook
Twitter
Telegram
WhatsApp

ರಾಮನಗರ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಬಗ್ಗೆ ವಾಟಾಳ್ ನಾಗರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನು ಆಗುತ್ತಾ ಇದೆ ಅಂತ ಯಾರು ಊಹಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ನಾಲ್ಕು ಜನ ಮುಖಂಡರು ಅವರು ಯಾವ ಮೂಲೆಯಲ್ಲಿ ಹೇಳಿದ್ರೂನು ಅವರದ್ದು ಪವಿತ್ರ ಅಂತ ತೀರ್ಮಾನವಾಗಿದೆ. ನಾನು ಬಹಳ ಗಮನಿಸ್ತಾ ಇದ್ದೀನಿ ಎಂದಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಅಮಿತ್ ಶಾ ಬಂದಿದ್ದರು. ಯಾಕೆ ಬಂದರು ಅಲ್ಲಿಗೆ. 115ನೇ ಪುಣ್ಯ ದಿನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆಯ್ತು ಬಂದ್ರಿ ನೀವೂ ಅಲ್ಲಿ ಗಂಗಾ ಇಲ್ಲಿ ಸಿದ್ದಗಂಗಾ ಅಂತ ಹೇಳಿ ಹೆಲಿಕಾಪ್ಟರ್ ಹತ್ತಿ ಹೋಗ್ಬಿಟ್ರಿ. ವ್ಯವಸ್ಥೆ ಮಾಡಿದ್ದವರು ಸಂತೋಷವಾಗಿ ಶಬ್ಬಾಶ್ ಗಿರಿ ಕೊಟ್ಡಿದ್ದಾರೆ. ಮುಂದಿನದಲ್ಲಿ ಶಾ ಅವರು ನಾವೂ ಹೇಳಿದಂಗೆ ಕೇಳ್ತಾರೆ ಅನ್ನೋದು ಖಾತ್ರಿ ಆಗೋಯ್ತು.

ನಾನು ಕೇಳೋದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಯಾಕೆ ಕೊಡಲಿಲ್ಲ. ಕಾರಣ ಏನು. ಅಮಿತ್ ಶಾ ಬಂದ್ರು. ಕೇಂದ್ರದ ಗೃಹ ಮಂತ್ರಿ. ಅವ್ರು ಯಾಕೆ ಹೇಳಲಿಲ್ಲ. ಬರೀ ಸಮಾರಂಭಕ್ಕಷ್ಟೆ ಸೀಮಿತವಾ. ಸಮಾರಂಭ ಮಾಡಿ ಶಬ್ಬಾಶ್ ಗುರಿ ತೆಗೆದುಕೊಳ್ಳೋಕೆ ಮಾತ್ರ ಸೀಮಿತವಾ.. ಬಿಜೆಒಇ ಮುಖಂಡರುಗಳು ನಿಜವಾಗಲೂ ಮಾನ ಮರ್ಯಾದೆ ಗೌರವ ಇದ್ದಿದ್ದರೆ ಭದ್ರವಾಗಿ ಕೇಂದ್ರಸ ರ್ಕಾರದ ಮೇಲೆ ಒತ್ತಡ ಹೇರಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸಬೇಕಿತ್ತು. ಮಠದ ಆಶೀರ್ವಾದ ಬೇಕು, ಸಮಾರಂಭ ಬೇಕು ಆದರೆ ಭಾರತ ರತ್ನ ಯಾಕೆ ಕೊಡಿಸಲಿಲ್ಲ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಸಾಕಷ್ಡು ಜನರಿಗೆ ಭಾರತ ರತ್ನ ಕೊಟ್ಟಿದೆ. ಆದರೇ ಶ್ರೀಗಳಿಗೆ ಯಾಕೆ ಕೊಡುತ್ತಿಲ್ಲ. ಆ ಬಗ್ಗೆ ಕೇಂದ್ರ ಸರ್ಕಾರ ಬಾಯಿ ಬಿಡಬೇಕು. ಇಲ್ಲ ಅಂದ್ರೆ ಬಿಜೆಪಿ ಮುಖಂಡರು ಯಾರ್ ಯಾರಿದ್ದೀರಿ ನೀವೂ ರಾಜೀನಾಮೆ ಕೊಡಿ. ಭಾರತ ರತ್ನ ಕೊಡದೆ ಇರುವ ಕೇಂದ್ರ ಸರ್ಕಾರದ ಧೋರಣೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ –

ಚಿತ್ರದುರ್ಗದಲ್ಲಿ‌ ಆರಂಭಗೊಂಡ ಮತದಾನ ಪ್ರಕ್ರಿಯೆ : ಬೆಳ್ಳಂಬೆಳಿಗ್ಗೆಯೇ ಸಾಲುಗಟ್ಟಿ ನಿಂತ ಮತದಾರರು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಚಿತ್ರದುರ್ಗ ನಗರದ ವಿಪಿ ಬಡಾವಣೆಯ

ಮತ ಚಲಾಯಿಸಲು ಯಾವ ದಾಖಲೆಗಳು ಬೇಕು ? ಇಲ್ಲಿದೆ ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ :  ಮತದಾನ ಮಾಡಲು ಮತದಾರನು ಎಪಿಕ್ (ಆಧಾರ್) ಕಾರ್ಡ್ ಇಲ್ಲವೆಂದು ಚಿಂತಿಸಬೇಕಿಲ್ಲಾ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಚುನಾವಣಾ ಆಯೋಗವು ಎಪಿಕ್ ಕಾರ್ಡ್ ಹೊರತುಪಡಿಸಿ 12

error: Content is protected !!