Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಳ್ಳಾರಿಯಲ್ಲಿ ನದಿ ನೀರಲ್ಲಿ ಸಿಲುಕಿದ್ದ ಅರ್ಚಕರ ಕುಟುಂಬದ ರಕ್ಷಣೆ..!

Facebook
Twitter
Telegram
WhatsApp

 

ಬಳ್ಳಾರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಸಾಕಷ್ಟು ಸಮಸ್ಯೆ ತಲೆದೂರಿದೆ. ಜನರು ಜೀವನ ನಡೆಸುವುದಕ್ಕೂ ಕಷ್ಟವಾಗಿದೆ. ಎಷ್ಟೋ ಹಳ್ಳಿಗಳು ನೀರಿನಿಂದ ಮುಳುಗಡೆಯಾಗಿದೆ. ಇನ್ನು ಉತ್ತರ ಕರ್ನಾಟಕ, ಮಲೆನಾಡು ಕಡೆಗಳೆಲ್ಲಾ ಮಳೆ ಹೆಚ್ಚಾಗಿದೆ. ಇನ್ನು ಕೆಲವು ದಿನಗಳ ಕಾಲ ಇದೆ ರೀತಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

ಈ ಮಧ್ಯೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಮುದೇಗುಪ್ಪದಲ್ಲಿ ಪ್ರವಾಹ ಬಂದಿದೆ. ಈ ಪ್ರವಾಹದಲ್ಲಿ ನೆರೆಯಲ್ಲಿ ಅರ್ಚಕರ ಕುಟುಂಬ ಹಾಗೂ ಸಿಬ್ಬಂದಿಗಳು ಸಿಲುಕಿಕೊಂಡಿದ್ದರು. ಶನೇಶ್ಚರ ದೇವಸ್ಥಾನದ ಪಕ್ಕದಲ್ಲಿಯೇ ಅರ್ಚಕರ ಕುಟುಂಬವಿತ್ತು. ನೆರೆಪ್ರವಾಹ ಉಂಟಾದ ಕಾರಣ ಅರ್ಚಕರನ್ನು ಕರೆತರಲು ಬೋಟ್ ನಲ್ಲಿ ತೆರಳಿದ್ದಾಗ ಬೋಟ್ ಮಗುಚಿಕೊಂಡಿತ್ತು. ಅಗ್ನಿಶಾಮಕ ದಳ ಸೇರಿದಂತೆ 10 ಜನ ಮತ್ತೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಇದೀಗ ಮತ್ತೊಂದು ಬೋಟ್ ಕಳುಹಿಸಿ ಅವರನ್ನು ರಕ್ಷಿಸಲಾಗಿದೆ.

ಇನ್ನು ಇದೇ ಜಿಲ್ಲೆಯಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ದೋಣಿಗಳ ಮೂಲಕ ಓಡಾಡುವ ಸ್ಥಿತಿ ಎದುರಾಗಿದೆ. ಬಸರಕೋಡು ಗ್ರಾಮಕ್ಕೆ ನದಿ ನೀರು ನುಗ್ಗಿದೆ. ಎಲ್ಲರೂ ತೆಪ್ಪದ ಮೂಲಕ ಸಾಗಿಸುತ್ತಿದ್ದಾರೆ. ಅಲ್ಲಿನ ಜನರಿಗೆ ಊಟದ ವ್ಯವಸತೆಯನ್ನು ಮಾಡಲಾಗುತ್ತಿದೆ. ಇದೊಂದೆ ಅಲ್ಲ ವೇದಾವತಿ ನದಿಯ ಪ್ರವಾಹ ಸುಮಾರು 250ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಭಿಮಾನಿಗಳು, ಕಾರ್ಯಕರ್ತರಿಗೆ ಪ್ರೀತಿಯ ಪತ್ರ ಬರೆದು, ಮನವಿ ಮಾಡಿದ ದೇವೇಗೌಡರು..!

ಬೆಂಗಳೂರು: ದೊಡ್ಡಗೌಡರ ಮನೆಯಲ್ಲಿ ಇನ್ನು ಬೇಸರದ ಛಾಯೆ ಆರಿಲ್ಲ. ಯೋಚನೆ, ನೋವಲ್ಲಿಯೇ ಇದ್ದಾರೆ. ಯಾಕಂದ್ರೆ ಮಾಜಿ ಪ್ರಧಾನಿಗಳ ಕುಟುಂಬದಲ್ಲಿ ಇಂಥದ್ದೊಂದು ಅಪವಾದ ಬಂದರೆ ಸಹಿಸುವುದಾದರೂ ಹೇಗೆ..? ದೇವೇಗೌಡರಿಗೆ ಈಗಾಗಲೇ 91 ವರ್ಷ ವಯಸ್ಸಾಗಿದೆ. ಅವರ

ಮಾರುಕಟ್ಟೆಗೆ ಬಂತು ನ್ಯಾನೋ ಎಲೆಕ್ಟ್ರಾನಿಕ್ ಕಾರು : ಏನಿಲ್ಲಾ ವಿಶೇಷತೆ ಇದೆ ಗೊತ್ತಾ..?

ಎಲೆಕ್ಟ್ರಾನಿಕ್ ಬೈಕ್, ಕಾರುಗಳಿಗೆ ಭಾರತದಲ್ಲಿ ಸಿಕ್ಕಪಟ್ಟೆ ಡಿಮ್ಯಾಂಡ್ ಇದೆ. ಪೆಟ್ರೋಲ್ ದರ ಏರಿಕೆಯಾದ ಬೆನ್ನಲ್ಲೇ ಜನ ಎಲೆಕ್ಟ್ರಾನಿಕ್ ಮೊರೆ ಹೋಗುತ್ತಿದ್ದಾರೆ‌.‌ಇದೇ ಕಾರಣಕ್ಕಾಗಿಯೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ. ಇದೀಗ ಭಾರತಕ್ಕೆ ನ್ಯಾನೋ ಎಲೆಕ್ಟ್ರಾನಿಕ್ ಕಾರು

ಬರ, ಬೆಳೆ ನಾಶದಿಂದ ಕಂಗೆಟ್ಟ ರೈತರ ಕಣ್ಣಲ್ಲಿ ನೀರು ತರಿಸಬಾರದು : ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೂ, ಕೆಲವು ಬ್ಯಾಂಕ್ ಗಳು ಅದನ್ನ ಸಾಲದ ಮೊತ್ತಕ್ಕೆ ವಜಾ ಮಾಡಿಕೊಳ್ಳುತ್ತಿವೆ. ಯಾದಗಿರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಬೆಳವಣಿಗೆ ರೈತರಿಗೂ ಆತಂಕ ತಂದೊಡ್ಡಿದೆ. ಬೆಳೆನಾಶದ

error: Content is protected !!