ಬೆಂಗಳೂರು; ಪಾಕಿಸ್ತಾನಿಯರನ್ನು ಹೊಡೆದುರುಳಿಸಲು ನಮ್ಮ ಭಾರತದ ಸೈನಿಕರು ಹೋರಾಟಮಾಡುತ್ತಿದ್ದಾರೆ. ಉಗ್ರರ ಅಡಗುತಾಣಗಳು ಎಲ್ಲೆಲ್ಲಿ ಇದಾವೆ, ಅಲ್ಲೆಲ್ಲಾ ಅಟ್ಯಾಕ್ ಮಾಡುತ್ತಿದ್ದು, ಎಲ್ಲರನ್ನು ಸದೆ ಬಡಿಯುತ್ತಿದ್ದಾರೆ. ಯುದ್ಧ ಭೀತಿಯಲ್ಲಿ ಪಾಕಿಸ್ತಾನ ಬೆವರಿ ಹೋಗಿದೆ. ನಮ್ಮ ಸೈನಿಕರ ಆಯಸ್ಸು, ಆರೋಗ್ಯ, ಯಶಸ್ಸಿಗಾಗಿ ಇಡೀ ಭಾರತ ದೇಶವೇ ಪ್ರಾರ್ಥನೆ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಕೂಡ ತಿರಂಗ ಯಾತ್ರೆ ಶುರು ಮಾಡಿದೆ. ಭಯೋತ್ಪಾದಕರನ್ನು ಹೊಡೆದುರುಳಿಸಿದ ನಮ್ಮ ಸೈನಿಕರಿಗೆ ಬೆಂಬಲವಾಗಿ ತಿರಂಗ ಯಾತ್ರೆ ನಡೆಸುತ್ತಿದ್ದಾರೆ.
ಈ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ನಾಯಕರು ಸೇರಿದ್ದಾರೆ. ತಿರಂಗ ಯಾತ್ರೆಯ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಭಾರತಕ್ಕೆ ಎಲ್ಲಾ ನಡೆಸುವಂಥ ಕೆಪಾಸಿಟಿ ಇದೆ. ಇವತ್ತು ಪಾಕಿಸ್ತಾನಕ್ಕೆ ಏನು ಉತ್ತರ ಕೊಡಬೇಕೋ ಅದನ್ನ ನಮ್ಮವರು ಕೊಡ್ತಾ ಇದಾರೆ. ಹೀಗಾಗಿ ನಮಗೆ ಭಾರತದ ಬಗ್ಗೆ ಅಪಾರವಾದ ಹೆಮ್ಮೆ ಇದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂದಿದ್ದಾರೆ.
ತಿರಂಗ ಯಾತ್ರೆಯಲ್ಲಿ ಉಗ್ರರ ಹುಟ್ಟಡಗಿಸಿದ ನಮ್ಮ ಸೈನಿಕರ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುತ್ತಿರುವ ಭಾರತೀಯ ಸೇನೆಯ ಆತ್ಮಸ್ಥೈರ್ಯ ಹೆಚ್ಚಿಸಲು, ಬಲ ತುಂಬಿಸಲು ಮತ್ತು ಅದರೊಂದಿಗೆ ಸಮಗ್ರತೆಯನ್ನು ಪ್ರದರ್ಶಿಸಲು ತಿರಂಗ ಯಾತ್ರೆಯನ್ನು ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಯುದ್ಧ ಇನ್ನು ಶುರುವಾಗಿಲ್ಲ. ಯುದ್ಧ ಬೇಡ ಅಂತ ನಾವೂ ಬಯಸುತ್ತೇವೆ. ಆದರೆ ಪಾಕಿಸ್ತಾನದ ಸೇನೆ ನಮ್ಮೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಬಿಟ್ಟು ಅಮಾಯಕರನ್ನು ಕೊಲ್ಲಿಸುವುದು ಮಾಡುತ್ತಿದೆಮ ಪಾಕಿಸ್ತಾನದ ಎಲ್ಲಾ ಯೋಚನೆಗಳಿಗೆ ಸರಿಯಾದ ಉತ್ತರ ನೀಡುತ್ತಿರುವ ನಮ್ಮ ಸೇನೆಯನ್ನು ಅಭಿನಂದಿಸುತ್ತ, ಅವರೊಂದಿಗೆ ನಾವಿದ್ದೇವೆ ಎಂದಿದ್ದಾರೆ.




