ಬೆಂಗಳೂರು: ಅಣ್ಣಾವ್ರ ಸ್ಮಾರಕದ ಬಗ್ಗೆ ಮಾತನ್ನಾಡಿದ್ದ ನಟ ಚೇತನ್ ವಿರುದ್ಧ ಸಾರಾ ಗೋವಿಂದು ಆಕ್ರೋಶ ಹೊರ ಹಾಕಿದ್ದರು. ಅವರ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದರು. ಈ ಸಂಬಂಧ ಸಾರಾ ಗೋವಿಂದು ವಿರುದ್ಧ ಎಫ್ಐಆರ್ ದಾಖಲಾಗಿದೆ. ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಅಣ್ಣಾವ್ರ ಸಮಾಧಿ ಜಾಗದ ಬಗ್ಗೆ ಪ್ರಶ್ನೆ ಮಾಡಿ ಹಾಕಿದ್ದ ಪೋಸ್ಟ್ ಗೆ ಯಾರೆಲ್ಲಾ ವಿರೋಧ ವ್ಯಕ್ಯಪಡಿಸಿದ್ರು, ಯಾರೆಲ್ಲಾ ತನ್ನ ವಿರುದ್ಧವಾಗಿ ಆಕ್ರೋಶ ಹೊರ ಹಾಕಿದರು ಅವರೆಲ್ಲರ ಮೇಲೆ ಚೇತನ್ ಅಹಿಂಸಾ ಇಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಹೋಗಿ, ಸಾರಾ ಗೋವಿಂದು, ಶಿವರಾಮೇಗೌಡ, ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಮನೆಯ ಬಳಿ ಸಾರಾ ಗೋವಿಂದು ಅವರ ಜೋರು ಗಲಾಟೆಯನ್ನು ಮಾಡಿದ್ದರು. ಹೀಗಾಗಿ ಆ ಸಂಬಂಧ ದೂರು ದಾಖಲು ಮಾಡಿದ್ದಾರೆ.

ಸಾ.ರಾ ಗೋವಿಂದು ಮನೆ ಹತ್ರ ಬಂದಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ರು. ಸಾರಾ ಗೋವಿಂದು ಹಿನ್ನೆಲೆಯೇ ಬೇರೆ ಇದೆ. ಅವರು ದುರಹಂಕಾರದಲ್ಲಿ ಮತ್ತು ಗೂಂಡಾಗಿರಿ ಮಾಡ್ತಿದ್ದಾರೆ. ಎಲ್ಲಾ ಸಂಘಟನೆಗಳು ಸೇರಿ ದಾಖಲೆ ಸಮೇತ ದೂರು ನೀಡಿದ್ದೇವೆ ಅಂತ ನಟ ಚೇತನಾ ಅಹಿಂಸಾ ತಿಳಿಸಿದ್ರು.
ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚೇತನ್ ಅಹಿಂಸಾ ಸಾಕಷ್ಟು ಜನರ ವಿರೋಧವನ್ನು ಎದುರಿಸಿದ್ದರು. ಈ ಸಂಬಂಧ ಚೇತನ್ ಕ್ಷಮೆಯನ್ನು ಕೇಳಿದ್ದರು. ಆದರೆ ಇದೀಗ ದೂರು ನೀಡಿದ್ದಾರೆ.



















