Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾನಾ ದೇಶಗಳ ಕನ್ನಡ ಮನಸ್ಸುಗಳನ್ನ ಒಟ್ಟುಗೂಡಿಸಿದ ‘ತೋತಾಪುರಿ’

Facebook
Twitter
Telegram
WhatsApp

ಇಷ್ಟು ದಿನ ತೋತಾಪುರಿ ಅಂದ್ರೆ ಒಂದೊಳ್ಳೆ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನೋದಷ್ಟೆ ತಲೆಯಲ್ಲಿತ್ತು. ಆದ್ರೆ ಇವತ್ತಿನ ವಿಶೇಷ ಕೇಳುತ್ತಿದ್ದರೆ ಹೆಮ್ಮೆ ಎನಿಸದೆ ಇರದು. ಯಾಕಂದ್ರೆ ತೋತಾಪುರಿ ಸಿನಿಮಾ ಹಲವು ದೇಶಗಳ ಕನ್ನಡ ಮನಸ್ಸುಗಳನ್ನ ಒಗ್ಗೂಡಿಸುವ ಕೆಲಸ ಮಾಡಿದೆ. ಇದಕ್ಕಿಂತ ಬೇರೆ ಖುಷಿ ಪಡೋ ವಿಚಾರ ಬೇಕೇ..?.


ಇತ್ತೀಚೆಗಷ್ಟೇ ತೋತಾಪುರಿ ಸಿನಿಮಾದ ಬಾಗ್ಲು ತೆಗಿ ಮೆರಿ ಜಾನ್ ಅನ್ನೋ ಹಾಡು ರಿಲೀಸ್ ಆಗಿತ್ತು. ಆ ಹಾಡು ನೋಡು ನೋಡುತ್ತಿದ್ದಂತೆ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿತ್ತು. ಆ ಖುಷಿಯನ್ನ ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರು ಸೆಲೆಬ್ರೇಟ್ ಮಾಡಲು, ಕಾರ್ಯಕ್ರಮವೊಂದನ್ನ ಏರ್ಪಡಿಸಿದ್ದರು. ತೋತಾಪುರಿ ವರ್ಚುವಲ್ ಗ್ಲೋಬಲ್ ಮೀಟ್ ಕಾರ್ಯಕ್ರಮದಲ್ಲಿ ಸುಂದರ ಎನಿಸುವ ಅದೆಷ್ಟೋ ವಿಚಾರಗಳು ನಡೆದಿವೆ.

ಬೃಹತ್ ಸೆಟ್ ನಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ತೋತಾಪುರಿ ಹೀರೋ ಜಗ್ಗೇಶ್ ಭಾಗವಹಿಸಿದ್ದರು. ಸುಮಾರು 3 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರ ಮುಂದೆ ಜಗ್ಗೇಶ್ ಸಿನಿಯಾನ, ಅವರ ಕುಟುಂಬ, ಕನ್ನಡ ಭಾಷೆ, ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಜೊತೆಗಿನ ಒಡನಾಟವನ್ನೆಲ್ಲ ನಟ ಜಗ್ಗೇಶ್ ಆ ಕ್ಷಣ ನೆನೆದಿದ್ದಾರೆ.

ಕೆನಡಾದ `ಡ್ರೀಮ್ ಮೀಡಿಯಾ’ ಆಯೋಜಿಸದ್ದಿ ಈ ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ಜಗ್ಗೇಶ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಒಂದಷ್ಟು ಕಾಮಿಡಿ ಝಲಕ್ ನೊಂದಿಗೆ ಎಲ್ಲರೊಟ್ಟಿಗೆ ಸಂತಸದ ಸಮಯ ಕಳೆದಿದ್ದಾರೆ. ಬಹುಶಃ ಕನ್ನಡದಲ್ಲೇ ಈ ರೀತಿಯ ಕಾರ್ಯಕ್ರಮ ಏರ್ಪಟ್ಟಿರೋದು ಇದೇ ಮೊದಲ ಸಲ. ವಿದೇಶಿ ಕನ್ನಡಿಗರು ತೋತಾಪುರಿ ಸವಿಯನ್ನ ಜಗ್ಗೇಶ್ ಅವರ ಮಾತಲ್ಲೇ ಸವಿದು, ಆಲ್ ದಿ ಬೆಸ್ಟ್ ಹೇಳಿದ್ದಾರೆ.

ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಮೋನಿಫ್ಲಿಕ್ಸ್ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ `ತೋತಾಪುರಿ’ಗೆ ಬಂಡವಾಳ ಹೂಡಿದ್ದಾರೆ. ಅದಿತಿ ಪ್ರಭುದೇವ, `ಡಾಲಿ’ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರು ತಾರಾಬಳಗದಲ್ಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!