Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕ್ಯಾಲ್ಸಿಯಂ ಬೇಕು ಎಂಬುವವರು ನುಗ್ಗೆಕಾಯನ್ನು ಹೆಚ್ಚಾಗಿ ಸೇವಿಸಿ

---Advertisement---

 

ನುಗ್ಗೆಕಾಯಿಯಲ್ಲಿಯೂ ಹಲವು ಪೋಷಕಾಂಶಗಳು ಅಡಗಿವೆ. ಕೆಲವೊಂದಿಷ್ಟು ಮಂದಿಗೆ ನುಗ್ಗೆಕಾಯಿ ಎಂದರೆ ಆಗೋದೆ ಇಲ್ಲ. ತಿನ್ನುವುದಕ್ಕೂ ಕಷ್ಟ. ಆದರೆ ನುಗ್ಗೆಕಾಯಿ ತಿನ್ನೊಂದ್ರಿಂದ ಹಲವು ರೋಗಗಳಿಗೆ ಗುಡ್ ಬೈ ಹೇಳಬಹದು. ಅದರಲ್ಲೂ ಈ ಮೂಳೆಯ ಸಮಸ್ಯೆಗಳಿಂದ ಏನಾದರೂ ಬಳಲುತ್ತಾ ಇದ್ದರೆ ಅಂತವರಿಗೆ ಇದು ರಾಮಬಾಣ ನೋಡಿ. ಅದೇಗೆ ಎಂಬ ಮಾಹಿತಿ ಇಲ್ಲಿದೆ.

* ಸಾಮಾನ್ಯವಾಗಿ ಕ್ಯಾಲ್ಸಿಯಂಗೋಸ್ಕರ ಹಾಲನ್ನ ಕುಡಿತೀವಿ. ಆದರೆ ಹಾಲಿಗಿಂತ 4 ಪಟ್ಟು ಕ್ಯಾಲ್ಸಿಯಂ ಅಂಶ ಈ ನುಗ್ಗೆಕಾಯಿಯಲ್ಲಿದೆ.

* ಬಾಳೆ ಹಣ್ಣಿಗಿಂತ ಮೂರು ಪಟ್ಟು ಪೊಟ್ಯಾಸಿಯಮ್‌ ಇದೆ. ಅಷ್ಟೇ ಅಲ್ಲ ಮಾಂಸಕ್ಕಿಂತ ಎರಡು ಪಟ್ಟು ಪ್ರೋಟಿನ್ ಕೂಡ ಸಿಗಲಿದೆ. ಹೀಗಾಗಿ ಈ ನುಗ್ಗೆಕಾಯಿಯನ್ನ ಪ್ರತಿದಿನಬಳಜೆ ಮಾಡದೆ ಹೋದರೂವಾರಕ್ಕೆ ಎರಡು ಸಲವಾದರೂ ತಿನ್ನಿ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ.

* ಅದರಲ್ಲೂ ಇತ್ತೀಚಿನ ದಿನವಳಲ್ಲಿ ಮೂಳೆ ಸಮಸ್ಯೆ ಇರುವವರು ಸಿಗುವುದೇ ಹೆಚ್ಚು. ಎಷ್ಟೇ ಹಾಲನ್ನ ಕುಡಿದರು ಅದರಲ್ಲಿ ಅಷ್ಟು ಪ್ರಮಾಣ ಕ್ಯಾಲ್ಸಿಯಂ ಸಿಗೋದಿಲ್ಲ. ಹೀಗಾಗಿ ಮೂಳೆಯ ಸಮಸ್ಯೆ ಇರುವವರು, ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಾ ಇರುವವರು ನುಗ್ಗೆಕಾಯಿ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ.

* ಸಾಮಾನ್ಯವಾಗಿ ನುಗ್ಗೆಕಾಯಿಯನ್ನ ಸಾಂಬಾರ್ ಮಾಡಿಕೊಂಡು ತಿನ್ನುವವರೇ ಹೆಚ್ಚು. ಬೇರೆ ಐಟಂ ಮಾಡೋದಕ್ಕಿಂತ ಸಾಂಬಾರ್ ರುಚಿ ಚೆನ್ನಾಗಿಯೇ ಇರಲಿದೆ. ಹೀಗಾಗಿ ಮನೆಯಲ್ಲಿ ನುಗ್ಗೆಕಾಯಿ ಸಾಂಬಾರ್ ಅನ್ನ ಎರಡ್ಮೂರು ದಿನಕ್ಕೊಮ್ಮೆಯಾದರೂ ಮಾಡ್ತಾ ಇರಿ. ಹಲವು ಕಾಯಿಲೆಗಳಿಗೆ ಒಂದೇ ತರಕಾರಿಯಲ್ಲಿ ಪರಿಹಾರ ಸಿಗಲಿದೆ ಅಂದ್ರೆ ಅದನ್ನ ತಿನ್ನೋದು ಉತ್ತಮ ಅಲ್ವಾ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕೆಮಿಕಲ್ ಯುಕ್ತ ಆಗಿರೋ ಕಾರಣ ರಾಶಿ ತಿಂದ್ರು ಸಿಗೋದು ಉಂಡೆಗಾತ್ರದ ಫೋಷ್ಠಿಕಾಂಶ. ಹೀಗಾಗಿ ಎಲ್ಲಾ ತರಕಾರಿಗಳನ್ನು ತಿನ್ನುವುದಕ್ಕೆ ಪ್ರಯತ್ನಿಸಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...