ಬೆಂಗಳೂರು: ದಾವಣಗೆರೆ ಬೈ ಎಲೆಕ್ಷನ್ ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೆ ಹೋದ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಜಮೀರ್ ಭೇಟಿ ಮಾಡಿದ್ದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ಜೆಡಿಎಸ್ ಪಕ್ಷಕ್ಕೆ ಸೇರ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಆ ವಿಚಾರಕ್ಕೆ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಥೋ.. ಥೋ.. ಥೋ ನಾನ್ಯಾಕೆ ಜೆಡಿಎಸ್ ಹೋಗಲಿ. ಆ ಪಕ್ಷವನ್ನ ಬಿಟ್ಟು ಬಂದಿರೋದು ನಾನು. ಕಾಂಗ್ರೆಸ್ ಪಕ್ಷ ನಂಗೇನ್ ಕಡಿಮೆ ಮಾಡಿದೆ. ನಾನು ನಿರೀಕ್ಷೆಯನ್ನು ಇಟ್ಟಿಲ್ಲ. 2017 ರಲ್ಲಿ ಕಾಂಗ್ರೆಸ್ ಬಂದೆ ನಾನು. 2018 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರೂ. ಅದರಲ್ಲಿ ನನ್ನ ಮಂತ್ರಿ ಮಾಡ್ತಾರೆ ಅಂತ ನಾನು ನಿರೀಕ್ಷೆಯನ್ನು ಇಟ್ಟಿರಲಿಲ್ಲ, ಯಾರತ್ರಾನೂ ನಾನೂ ಕೇಳಿರಲಿಲ್ಲ. ಆ ಟೈಮ್ ನಲ್ಲೆ ಪಕ್ಷ ನಂಗೆ ಮಂತ್ರಿ ಮಾಡಿ, ಪವರ್ ಫುಲ್ ಖಾತೆ ಕೊಟ್ಟಿದ್ರು. ಇದೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಮಂತ್ರಿ ಆಗಿದ್ದೆ. ಆದರೆ ಯಾವ ಖಾತೆ ಕೊಟ್ಟಿದ್ದರು, ಹಜ್ ಕೊಟ್ಟಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ನಾನು ನಿರೀಕ್ಷೆ ಇಟ್ಟಿರಲಿಲ್ಲ, ಆದರೂ ಐದು ಖಾತೆ ಕೊಟ್ಟಿದ್ದರು. 2023ರಲ್ಲಿ ಮತ್ತೆ ನಾಲ್ಕು ಖಾತೆ ಕೊಟ್ಟಿದೆ. ಏನ್ ಕಡಿಮೆ ಮಾಡಿದೆ ಕಾಂಗ್ರೆಸ್ ನಂಗೆ ಜನತಾ ದಳ ಹೋಗೋದಕ್ಕೆ. ನಂಗಿಂತ ಹಿರಿಯರಿದ್ದರು. ಅವರೆಲ್ಲರನ್ನು ಬಿಟ್ಟು ನನ್ನನ್ನ ಮಾಡಬೇಕಾದರೆ. ಅವರ ಜೊತೆಗೆ (ಹೆಚ್ಡಿಕೆ) ನಾನ್ಯಾಕ್ ರೀ ಮಾತನ್ನಾಡಲಿ. ಸುಮ್ಮನೆ ಎಲ್ಲವೂ ಊಹಾಪೋಹಾ ಅಷ್ಟೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











