ಇದ್ದು ಬಿದ್ದು ಹೋಗುವ ಶರೀರ.. ನಿಮ್ಮಗಳ ಸೇವೆಗೆ ಮೀಸಲು : ಆಸ್ಪತ್ರೆಯಲ್ಲೇ ಮನವಿ ಮಾಡಿದ ಬಾಬೂರಾವ್

suddionenews
1 Min Read

 

ಯಾದಗಿರಿ: ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಚುನಾವಣಾ ಸಮಯದಲ್ಲಿ ಆಸ್ಪತ್ರೆಯಿಂದಾನೇ ಮನವಿ ಮಾಡಿದ್ದಾರೆ. ಮತದಾರರಿಗೆ ಈ ಬಾರಿಯೂ ನನಗೆ ವೋಟ್ ಮಾಡಿ ಎಂದಿದ್ದಾರೆ.

ಗುರುಮಠಕಲ್ ಕ್ಷೇತ್ರದಿಂದ ಬಾಬುರಾವ್ ಚಿಂಚನಸೂರು ಅಭ್ಯರ್ಥಿಯಾಗಿದ್ದಾರೆ. ಏಪ್ರಿಲ್ 15 ರಂದು ಚಿಂಚನಸೂರು ಅವರ ಕಾರು ಅಪಘಾತವಾಗಿತ್ತು. ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಚಿಂಚನಸೂರು, ಇದು ಚುನಾವಣೆಯ ಹೊತ್ತಾಗಿರುವ ಕಾರಣ, ಪ್ರಚಾರಕ್ಕೆ ಹೋಗಲು ಸಾಧ್ಯವಾಗದೆ, ಆಸ್ಪತ್ರೆಯಲ್ಲಿಯೇ ಮಲಗಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ‌ ಆಸ್ಪತ್ರೆಯ ಬೆಡ್ ಮೇಲೆಯೆ ಮಲಗಿ, ವಿಡಿಯೋ ಮೂಲಕ ಮತಬೇಟೆ ಆರಂಭಿಸಿದ್ದಾರೆ. ತಮ್ಮ ಸೇವೆ ಮಾಡಲು ನಾನು ಇನ್ನೂ ಜೀವಂತ ಇದ್ದೇನೆ. ಇದು ಬಿದ್ದು ಹೋಗುವ ಶರೀರ.‌ ಹಾಗೆಯೇ ಸಾಯುವ ಬದಲು ಬಡವರ ಸೇವೆ ಮಾಡುತ್ತೇನೆ. ನಾನು ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *