Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಮೀನಿನಲ್ಲಿ ವಿದ್ಯುತ್ ತಂತಿಗಳನ್ನು ಬಿಡದ ಕಳ್ಳರು : ಧಾರವಾಡ ರೈತರಿಗೆ ಆತಂಕ

Facebook
Twitter
Telegram
WhatsApp

 

ಧಾರವಾಡ: ಮಳೆ ಇಲ್ಲದೆ ಬೆಳೆ ನೆಲಕಚ್ಚಿದೆ. ಭೂಮಿಯಲ್ಲಿರುವ ಸಸಿ ಸೀದು ಹೋಗುತ್ತಿದೆ. ಇದರ ಜೊತೆಗೆ ಧಾರವಾಡದ ರೈತರಿಗೆ ಕಳ್ಳರ ಕಾಟ ಬೇರೆ ಜಾಸ್ತಿಯಾಗಿದೆ. ರೈತರ ಜಮೀನುಗಳಲ್ಲಿರುವ ವಿದ್ಯುತ್ ತಂತಿಯನ್ನು ಬಿಡುತ್ತಿಲ್ಲ.

 

ಈ ಮೊದಲು ರೈತರ ಪಂಪ್ ಸೆಟ್ ಹಾಗೂ ಜಮೀನಿನಲ್ಲಿದ್ದ ಹಲವು ಪರಿಕರಗಳನ್ನು ಕದಿಯುತ್ತಿದ್ದರು. ಈಗ ರೈತರ ಜಮೀನುಗಳಿಗೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಕದಿಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರ ಮೊರೆ ಹೋಗಿದ್ದರು, ಕಳ್ಳರು ಮಾತ್ರ ಸಿಕ್ಕಿಲ್ಲ.

 

ಇನ್ನು ನವಲಗುಂದ ತಾಲೂಕಿನ ತಲೆ ಮೊರಬ ಗ್ರಾಮದಲ್ಲಿ ರೈತರ ಜಮೀನುಗಳಿರುವ ವಿದ್ಯುತ್ ಕಂಬದಿಂದಾನೇ ತಂತಿಗಳನ್ನು ಕಳ್ಳತನ ಮಾಡುತ್ತಿದ್ದಾರೆ. 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಹೆಸ್ಕಾಂ ರೈತರ ಜಮೀನುಗಳಿಗೆ ಅಳವಡಿಕೆ ಮಾಡಿದ್ದರು. 14 ಕಂಬಗಳಿಗೆ ನಾಲ್ಕು ವಿದ್ಯುತ್ ತಂತಿ ಅಳವಡಿಸಿದ್ದರು. ಆದರೆ ಮಾರನೇ ದಿನ ಬಂದು ನೋಡಿದರೆ ಆ ಕಂಬಗಳಲ್ಲಿ ವಿದ್ಯುತ್ ಅಳವಡಿಕೆಯ ತಂತಿಗಳೇ ಇಲ್ಲ. ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಕಲ್ಪಿಸುವ ಮುನ್ನವೇ ಕದ್ದು ಪರಾರಿಯಾಗಿದ್ದಾರೆ.

ಈ ವಿಚಾರ ತಿಳಿದ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ, ಇದು ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ‌ ಪಡೆದು ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಬೆಳೆಯನ್ನ ಪ್ರಾಣಿಗಳು ಹಾಳು ಮಾಡುತ್ತವೆ ಎಂಬ ಭಯಕ್ಕೆ ಹೊಲದಲ್ಲಿ ಗೊಂಬೆಗಳನ್ನ ನೆಡುತ್ತಾರೆ. ಆದರೆ ಹೀಗೆ ಮನುಷ್ಯರೇ ಬೆಳೆಗೆ ನೀರಿಲ್ಲದಂತೆ ಮಾಡುವ ಕೆಲಸಕ್ಕೆ ಕೈ ಹಾಕಿದರೆ, ರೈತ ತಾನೇ ಇನ್ನೆಷ್ಟು ಕಾವಲಿಗೆ ಇರುತ್ತಾನೆ. ಶಾಸಕರ ಸೂಕ್ತ ಕ್ರಮದಿಂದಾದ್ರೂ ಈ ಕಳ್ಳತನ ತಪ್ಪಬಹುದಾ ಎಂಬ ನಿರೀಕ್ಷಯಿಂದಾನೇ ರೈತ ಮುಂದೆ ನಡೆದಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮದಕರಿಪುರದಲ್ಲಿ ಕೊಲ್ಲಾಪುರದಮ್ಮ ಜಾತ್ರೆ | ಕೋಣ ಗುದ್ದಿ ಓರ್ವ ಮೃತ

  ಸುದ್ದಿಒನ್, ಚಿತ್ರದುರ್ಗ, ಮೇ. 01 : ಜಾತ್ರೆಯಲ್ಲಿ ದೇವಿಗೆ ಕೋಣ ಬಲಿ ಕೊಡುವ ವೇಳೆ ಕೊಣ ಗುದ್ದಿ ಕೊಲ್ಲಪ್ಪ (53 ವರ್ಷ) ಎಂಬಾತ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮದಕರಿ ಪುರ ಗ್ರಾಮದಲ್ಲಿ ಇಂದು

ರಾಹುಲ್ ಚೌದ್ರಿ ನಿಧನ

  ಹಿರಿಯೂರು, ಸುದ್ದಿಒನ್, ಮೇ. 01 : ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ರಾಹುಲ್ ಚೌದ್ರಿ (34) ಅವರು ಅನಾರೋಗ್ಯದಿಂದ ಇಂದು(ಬುಧವಾರ) ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು

ಹೆಚ್ಚು ನೀರು ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ : ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಅದಕ್ಕಾಗಿಯೇ ವೈದ್ಯರು ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲು ಹೇಳುತ್ತಾರೆ. ಹೆಚ್ಚು ನೀರು ಇರುವ ಹಣ್ಣುಗಳು ಮತ್ತು ಆಹಾರಗಳನ್ನು

error: Content is protected !!