Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ನಿಧನ : ಶೂಟಿಂಗ್ ನಲ್ಲಿದ್ದಾಗಲೇ ಹೃದಯಾಘಾತ

---Advertisement---

ಉಡುಪಿ: ಇತ್ತೀಚೆಗಷ್ಟೇ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಆ ನೋವು ಮಾಸುವ ಮುನ್ನವೇ ಇನ್ನೊಬ್ಬ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. 60 ವರ್ಷದ ರಾಜು ತಾಳಿಕೋಟೆ ಉಡುಪಿಯ ಮರಡಿಕಲ್ ಕಾಲೇಜಿನಲ್ಲಿ ನಿಧನರಾಗಿದ್ದಾರೆ.

ಶೂಟಿಂಗ್ ನಲ್ಲಿ ಭಾಗಿಯಾಗಿದ್ದಂತ ಸಂದರ್ಭದಲ್ಲಿಯೇ ಈ ದುರ್ಘಟನೆ ನಡೆದಿದೆ. ಶೈನ್ ಶೆಟ್ಟಿ ಅಭಿನಯದ ಸಿನಿಮಾದಲ್ಲಿ ರಾಜು ತಾಳಿಕೋಟೆ ಕಾಣಿಸಿಕೊಂಡಿದ್ದರು. ಆಗ ಎದೆ ನೊಇವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನ ಉಡುಪಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರೀತಿಸುವ ಹಿಡಿ ಜೀವಗಳನ್ನ ಬಿಟ್ಟು ಹೊರಟೆ ಹೋಗಿದ್ದಾರೆ. ನಾಟಕಗಳ ಮೂಲಕ, ಹಾಸ್ಯದ ಮೂಲಕ ಎಲ್ಲರನ್ನು ರಂಜಿಸಿದವರು. ಇಂದು ವಿಧಿಯ ಕೂಗಿಗೆ ಬಂದೇ ಎಂದು ಹೊರಟು ಹೋಗಿದ್ದಾರೆ.

ತಾಳಿಕೋಟೆ ಎಂಬ ಊರಿನಲ್ಲಿ ಹುಟ್ಟಿ ಬೆಳೆದವರು ರಾಜು. ಅವರು ಜನಿಸಿದ್ದು 1965ರಲ್ಲಿ. ಮುಂದೆ ಊರಿನ ಹೆಸರೊಂದಿಗೆ ಅಂದ್ರೆ ರಾಜು ತಾಳಿಕೋಟೆ ಎಂದೇ ಖ್ಯಾತಿ ಪಡೆದರು. ಅದೇ ಹೆಸರಿನಿಂದ ಗುರುತಿಸಲಾಯಿತು. ಆದರೆ ಅವರ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ ಎಂಬುದಾಗಿತ್ತು. ನಾಟಕಗಳಲ್ಲಿ, ಸಿನಿಮಾಗಳಲ್ಲಿ ರಾಜು ತಾಳಿಕೋಟೆ ಎಂಬ ಹೆಸರಿನೊಂದಿಗೆ ಖ್ಯಾತಿ ಪಡೆದರು. ಸಿನಿಮಾಗಳಲ್ಲೂ ಹೆಚ್ಚೆಚ್ಚು ನಗಿಸಿದರು. ಮನಸಾರೆ, ಪಂಚರಂಗಿ, ರಾಜಧಾನಿ, ಲೈಫು ಇಷ್ಟೇನೆ, ಅಲೆಮಾರಿ, ಮೈನಾ, ಟೋಪಿವಾಲಾ ಮುಂತಾದ ಸಿನಿಮಾಗಳಲ್ಲಿ ನಟಿಸಿ, ನಕ್ಕು ನಲಿಸಿದ್ದರು. ಅಷ್ಟೇ ಅಲ್ಲ ಬಿಗ್ ಬಾಸ್ ಸೀಸನ್ 7ರಲ್ಲಿಯೂ ಭಾಗವಹಿಸಿದ್ದರು. ಇದರ ಜೊತೆಗೆ ಊರಲ್ಲಿ ಕೃಷಿ ಮಾಡುತ್ತಾ, ಆಡುಗಳನ್ನು ಸಾಕುತ್ತಾ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದವರು, ಹಾರ್ಟ್ ಅಟ್ಯಾಕ್ ಎಂಬ ಭೂತ ಜೀವವನ್ನೇ ಕರೆದೊಯ್ದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...