Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಾಯಿ ಚಾಮುಂಡಿಗೆ ಹರಕೆ ರೂಪದಲ್ಲಿ ಸಲ್ಲಿಸುತ್ತಿರುವ ಸೀರೆಯಲ್ಲೂ ಅವ್ಯವಹಾರ : ಪೊಲೀಸ್ ಠಾಣೆಯಲ್ಲಿ ದೂರು, ಆಗಿದ್ದೇನು..?

---Advertisement---

ಮೈಸೂರು: ಜಿಲ್ಲೆಯ ವಿಚಾರದಲ್ಲಿ ದೊಡ್ಡ ದೊಡ್ಡ ಮಟ್ಟದ ಅವ್ಯವಹಾರಗಳ ಬಗ್ಗೆಯೇ ದೂರು ಸಲ್ಲಿಕೆಯಾಗುತ್ತಿವೆ. ಈಚೆಗಷ್ಟೇ ಮೂಡಾ ಹಗರಣವಾಯ್ತು ಈಗ ತಾಯಿ ಚಾಮುಂಡಿ ವಿಚಾರಕ್ಕೆ ದೂರು ಸಲ್ಲಿಕೆಯಾಗಿದೆ. ಮೂಡಾ ಹಗರಣದಲ್ಲಿ ಸದ್ದು ಮಾಡಿದ್ದ ಸ್ನೇಹಮಯಿ ಕೃಷ್ಣ ಅವರೇ ಈ ವಿಚಾರಕ್ಕೂ ದೂರು ಸಲ್ಲಿಕೆ ಮಾಡಿದ್ದಾರೆ.

 

ಚಾಮುಂಡಿ ತಾಯಿಗೆ ಭಕ್ತರ ಸಂಖ್ಯೆ ಏನು ಕಡಿಮೆ ಇಲ್ಲ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಿಂದಾನೂ ಅಷ್ಟೇ ಯಾಕೆ ಫಾರಿನರ್ಸ್ ಕೂಡ ತಾಯಿಗೆ ಭಕ್ತರೇ. ಬಂದವರಿಗೆ, ಬೇಡಿದವರಿಗೆ ತಾಯಿ ಬರಿಗೈನಲ್ಲಿ ಕಳುಹಿಸಲ್ಲ ಎಂಬ ನಂಬಿಕೆ ಇದೆ. ಭಕ್ತರಿಗೆ ಅದು ಅನುಭವ ಕೂಡ ಆಗಿದೆ. ಹೀಗಾಗಿ ಹರಕೆ ಹೊತ್ತು ತಾಯಿ ಸನ್ನಿಧಾನಕ್ಕೆ ಬರುವವರೇ ಹೆಚ್ಚು, ಹರಕೆ ತೀರುಸವವರು ಹೆಚ್ಚು. ಸಾಮಾನ್ಯವಾಗಿ ಹೆಣ್ಣು ದೇವರಿಗೆ ಮಡಿಲಕ್ಕಿ ಕೊಡುವ ಹರಕೆಯನ್ನೇ ಹೆಚ್ಚು ಹೊರುತ್ತಾರೆ. ಅದೇ ರೀತಿ ತಯಿ ಚಾಮುಂಡಿಗೂ ಮಡಿಲಕ್ಕಿ ಜೊತೆಗೆ ಸೀರೆಯನ್ನು ಭಕ್ತರು ನೀಡುತ್ತಾರೆ. ಈ ಸೀರೆಯನ್ನು ಒಮ್ಮೆ ದೇವರ ಮೈಮೇಲೆ ಹಾಕಿ, ಸಂಗ್ರಹಣಾ ಜಾಗಕ್ಕೆ ನೀಡುತ್ತಾರೆ. ತಾಯಿ ಮೈಮೇಲಿನ ಸೀರೆ ಸಿಕ್ಕರೆ ಭಕ್ತರು ಖುಷಿ ಪಡುತ್ತಾರೆ. ಆದರೆ ಈಗ ಇದನ್ನ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ. ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿ ರೂಪಾ ಅವರು ದೇವಿಗೆ ಉಡಿಸುವ ಸೀರೆಗಳನ್ನು ಕದ್ದೊಯ್ಯುತ್ತಿದ್ದಾರೆ ಅಂತ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಮೈಸೂರಿನ ಕೆ.ಆರ್.ಠಾಣೆಯಲ್ಲಿ ದೂರು ನೀಡಿದ್ದಾರೆ.

 

ಆದರೆ ಈ ಬಗ್ಗೆ ರೂಪಾ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಕಡೆಯಲ್ಲೂ ಸಿಸಿಟಿವಿ ಇದೆ. ಯಾವುದೇ ರೀತಿಯ ಕಳ್ಳತನ ನಡೆದಿಲ್ಲ. ಅದರಲ್ಲಿ ಇದ್ದದ್ದು ಫೈಲ್ ಗಳು ಮಾತ್ರ. ಅದಕ್ಕೆ ಸಂಬಂಧಿಸಿದಂತೆ ಒಬ್ಬ ಸಿಬ್ಬಂದಿಯನ್ನು ನಾನೇ ಅಮಾನತು ಮಾಡಿದ್ದೀನಿ ಎಂದು ಹೇಳಿದ್ದಾರೆ. ಆದರೆ ಹಸಿರು ಮೂಟೆಯಲ್ಲಿ ಟ್ರಾಫಿಕ್ ನಲ್ಲಿ ಸೀರೆ ಮಾರಾಟದ ದೃಶ್ಯಗಳು ವೈರಲ್ ಆಗಿವೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment