Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಯರ ಮಠಕ್ಕೂ ತಟ್ಟಿದ ಭಾಷೆಯ ವಿವಾದ..!

---Advertisement---

ರಾಯಚೂರು: ರಾಯರ ಮಠದಲ್ಲಿ ಈಗ ಭಾಷೆಯ ಗಲಾಟೆ ಶುರುವಾಗಿದೆ. ರಾಯರ ಮಠಕ್ಕೆ ಎಂಟ್ರಿಯಾದ ಕೂಡಲೇ ರಾಯರ ಶ್ಲೋಕವನ್ನ ಹಾಕಲಾಗಿದೆ. ಎಲ್ಲರೂ ಒಂದು ಸಲ ಆ ಸಾಲುಗಳನ್ನ ಪಠಿಸಿಯೇ ರಾಯರ ದರ್ಶನಕ್ಕೆ ಹೋಗುವುದು. ಈಗ ಅದೇ ಸಾಲುಗಳ ಬಗ್ಗೆ ತೆಲುಗು ಭಾಷಿಕರು ತಗಾದೆ ತೆಗೆದಿದ್ದಾರೆ. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಎಂಬ ಸಾಲುಗಳು.

ಈ ಶ್ಲೋಕವನ್ನ ಕನ್ನಡದಲ್ಲಿ ಹಾಕಲಾಗಿದೆ. ಆ ಕಾರಣದಿಂದಾನೇ ಈಗ ವಿವಾದ ಉಂಟಾಗಿದೆ. ಮಂತ್ರಾಲಯ ಇರುವುದು ರಾಯಚೂರಿನ ಕರ್ನೂಲ್ ನಲ್ಲಿ. ಈ ಕರ್ನೂಲ್ ಬಂದು ಆಂಧ್ರಗೆ ಸೇರುತ್ತದೆ. ಹೀಗಾಗಿ ಈ ಶ್ಲೋಕವನ್ನ ತೆಲುಗಿನಲ್ಲಿ ಬರೆಯಬೇಕಿತ್ತು. ಕನ್ನಡದಲ್ಲಿ ಯಾಕೆ ಬರೆದಿದ್ದೀರಿ ಎಂದು ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮೂಲಕ ಸಿಎಂ – ಡಿಸಿಎಂ ಅವರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇಲ್ಲಿ ತೆಲುಗು ಆಡಳಿತ ಮಂಡಳಿಯೂ ಇಲ್ಲ, ತೆಲುಗು ಭಾಷೆಗೆ ಪ್ರಾಮುಖ್ಯತದ ಕೂಡ ಇಲ್ವಲ್ಲ ಎಂಬ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ರಾಯರ ದ್ವಾರದ ಬಳಿ ಬರೆದಿರುವ ಶ್ಲೋಕ ಇಂದು ನಿನ್ನೆಯದ್ದಲ್ಲ. ಬಹಳ ವರ್ಷಗಳಿಂದಾನು ಈ ಶ್ಲೋಕವನ್ನ ಕನ್ನಡದಲ್ಲಿಯೇ ಮಠದ ಅಂಗಳದಲ್ಲಿ ಹಾಕಲಾಗಿದೆ. ಆದರೆ ಈಗ ಯಾಕೆ ಈ ರೀತಿಯ ವಿವಾದವನ್ನ ಹುಟ್ಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆಯೂ ಹಲವರನ್ನ ಕಾಡುತ್ತಿದೆ. ಹಾಗೇ ಈ ವಿವಾದದ ಸಂಬಂಧ ಮಠದ ಆಡಳಿತ ಮಂಡಳಿ ಇನ್ನು ಕೂಡ ಪ್ರತಿಕ್ರಿಯೆ ನೀಡಿಲ್ಲ.

ರಾಯರಿಗೆ ಭಕ್ತರ ಗಣ ಜಾಸ್ತಿ ಇದೆ. ಅದರಲ್ಲೂ ಕರ್ನಾಟಕದಿಂದಾನೇ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ನಮ್ಮ ಕರ್ನಾಟಕದ ಸೆಲೆಬ್ರಿಟಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಇದೀಗ ತೆಲುಗು ಭಾಷಿಗರ ವಿರೋಧಕ್ಕೆ ಮಠದ ಆಡಳಿತ ಮಂಡಳಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಎಂಬುದನ್ನ ನೋಡಬೇಕಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now