Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂದು ವರ್ತೂರು ಮೋಸದಾಟ ಬಯಲು.. ಇಂದು ಭವ್ಯಾ ಮೋಸದಾಟ : ಕಿಚ್ಚನ ಕಣ್ತಪ್ಪಿಸಿ ಏನು ಮಾಡೋಕೆ ಆಗಲ್ಲ..!

---Advertisement---

ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ತಪ್ಪು ಮಾಡಿದವರಿಗೆ ನೀರಿಳಿಸದೇ ಬಿಡುವುದಿಲ್ಲ. ಹಾಗೆ ನೋಡಿದ್ರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಕ್ಯಾಮಾರಗಳು ಇದಾವೆ ಎಂಬುದು ಎಲ್ಲರಿಗೂ ಗೊತ್ತು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಪ್ರಪಂಚಕ್ಕೆ ಕಾಣಿಸಲ್ಲ ಎಂಬಂತೆ ಬಿಗ್ ಬಾಸ್ ಮನೆ ಮಂದಿ ಭಾವಿಸಿದ್ದಾರೆ. ಇದೀಗ ಕಿಚ್ಚ ಎಲ್ಲಾ ಕಡೆ ಕ್ಯಾಮಾರಾ ಇದೆ ಎಂಬುದನ್ನು ಮನೆ ಮಂದಿಗೆ ನೆನಪು ಮಾಡಿದ್ದಾರೆ.

ಕಳೆದ ಸೀಸನ್ ನಲ್ಲಿ ವರ್ತೂರು ಸಂತೋಷ್ ಇದೇ ರೀತಿ ಮೋಸದಿಂದ ಗೆದ್ದಿದ್ದರು. ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಕಣ್ಣು ಮುಚ್ಚಿ ತಿರುಗುವ ಚೇರ್ ಮೇಲೆ ಕೂರಬೇಕು. 60 ಸೆಕೆಂಡ್ ಆದ ಕೂಡಲೇ ಗಂಟೆ ಹೊಡೆಯಬೇಕಿತ್ತು. ಆ ಟಾಸ್ಕ್ ನಲ್ಲಿ ವಿನಯ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಅದೇ ರೀತಿ ಗೆದ್ದರು ಕೂಡ. ಆಮೇಲೆ ಪಂಚಾಯ್ತಿಯಲ್ಲಿ ಕಿಚ್ಚ ನೀರಿಳಿಸಿದ್ದರು.

ಇದೀಗ ಈ ಸೀಸನ್ ನಲ್ಲಿ ಭವ್ಯ ಕೂಡ ಅಂಥದ್ದೇ ಮೋಸ ಮಾಡಿದ್ದಾರೆ. ಬಾಲ್ ಗಳನ್ನ ಬುಟ್ಟಿಗೆ ಹಾಕುವ ಟಾಸ್ಕ್ ನಲ್ಲಿ ತಮ್ಮದಲ್ಲದ ನಂಬರ್ ನಿಂದ ಬಾಲ್ ಬಿದ್ದಿದ್ದನ್ನು ತೆಗೆದುಕೊಂಡು ಹಾಕಿದ್ದಾರೆ. ಆ ಬಗ್ಗೆ ರಜತ್ ಹೇಳಿದರು ಭವ್ಯ ಕೇಳಿಲ್ಲ. ಈ ಮೋಸವನ್ನ ಇಡೀ ಮನೆ ಮುಂದೆ ಕಿಚ್ಚ ಬಹಿರಂಗ ಪಡಿಸಿದ್ದಾರೆ. ಈ ವಿಚಾರಕ್ಕೆ ರಜತ್ ವಿರುದ್ಧ ಚೈತ್ರಾ ರೊಚ್ಚಿಗೆದ್ದಿದ್ದಾರೆ. ಭವ್ಯಾ ಕಣ್ಣೀರು ಹಾಕಿಕೊಂಡು ಕೂತಿದ್ದಾರೆ. ಒಂದಂತು ಬಿಗ್ ಬಾಸ್ ಮಂದಿಗೆ ಅರ್ಥವಾಗಿದೆ. ಟಾಸ್ಕ್ ವಿಚಾರದಲ್ಲಿ ಕಣ್ಣು ತಪ್ಪಿಸಿ ಮೋಸ ಮಾಡಿದರೂ ಕಿಚ್ಚ ಸುಮ್ಮನೆ ಬಿಡಲ್ಲ ಎಂಬುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment