Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರತನ್ ಟಾಟಾ ಮನಸ್ಸು ಕದ್ದಿದ್ದರು ಆ ಬಾಲಿವುಡ್ ನಟಿ : ಆದರೆ ಮದುವೆಯಾಗದಿರಲು ಕಾರಣವೇನು ಗೊತ್ತಾ..?

---Advertisement---

ರತನ್ ಟಾಟಾ ದೇಶ ಕಂಡ ಯಶಸ್ವಿ ಉದ್ಯಮಿ. ಇವರು ಉದ್ಯಮದಲ್ಲಿ ಯಶಸ್ಸು ಕಂಡಷ್ಟೇ ಜನರ ಮನಸ್ಸನ್ನು ಗೆಲ್ಲುವಲ್ಲಿಯೂ ಯಶಸ್ಸು ಕಂಡಿದ್ದಾರೆ. 86 ವರ್ಷಗಳ ಕಾಲ ಸಾರ್ಥಕ ಬದುಕನ್ನು ಕಂಡಿದ್ದವರು. ವಯೋಸಹಜ ಕಾಯಿಲೆಯಿಂದ ಜಗತ್ತನ್ನೇ ತೊರೆದಿದ್ದಾರೆ. ಆದರೆ ಇವರ ಯೌವ್ವನದ ಜಗತ್ತಿನಲ್ಲಿ ಪ್ರೀತಿ-ಪ್ರೇಮದ ಕುರುಹು ಇತ್ತು. ಬಾಲಿವುಡ್ ಆ ನಟಿ ಇವರ ಮನಸ್ಸನ್ನು ಕದ್ದಿದ್ದರು. ಇಂದು ಅವರ ನಿಧನಕ್ಕೆ ಮಾಜಿ ಪ್ರೇಯಸಿಯೂ ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಆ ಮಾಜಿ ಪ್ರೇಯಸಿ ಯಾರು ಗೊತ್ತಾ..?

ರತನ್ ಟಾಟಾ ಅವರು ಉದ್ಯಮದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ, ಯಶಸ್ಸು ಪಡೆದವರು. ಆದರೆ ಪ್ರೀತಿಯಲ್ಲಿ ಅದೇಕೋ ಅವರು ಯಶಸ್ಸು ಕಾಣಲೇ ಇಲ್ಲ. ಎರಡೆರಡು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೂ ಒಮ್ಮೆಯೂ ಸಕ್ಸಸ್ ಆಗಲಿಲ್ಲ. ಲಾಸ್ ಏಂಜಲೀಸ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಗಲೇ ರತನ್ ಟಾಟಾಗೆ ಲವ್ ಆಗಿತ್ತು. ಆಕೆಯನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಆದರೆ ಅಮೆರಿಕಾದ ಹುಡುಗಿಯಾಗಿದ್ದ ಕಾರಣ, ಭಾರತದಲ್ಲಿ ನೆಲೆಸಲು ಒಪ್ಪಿರಲಿಲ್ಲ. ಅಂದು ಆ ಪ್ರೀತಿ ಮುರಿದು ಬಿತ್ತು. ನಂತರ ರತನ್ ಟಾಟಾ ಅವರ ಮನಸ್ಸು ಕದ್ದಿದ್ದೇ ಬಾಲಿವುಡ್ ನ ಬೆಡಗಿ.

70-80 ದಶಕದಲ್ಲಿ ಬಾಲಿವುಡ್ ನಲ್ಲಿ ಸಿಮಿ ಗರೆವಾಲ್ ಫೇಮಸ್ ಆಗಿದ್ದರು. ಇವರ ಮೇಲೆ ರತನ್ ಟಾಟಾಗೆ ಲವ್ ಆಗಿತ್ತಂತೆ. ಒಂದಷ್ಟು ವರ್ಷಗಳ ಕಾಲ ಇಬ್ಬರು ಒಟ್ಟೊಟ್ಟಿಗೆ ಓಡಾಡಿಕೊಂಡು ಇದ್ದರು ಎಂಬ ಮಾತಿದೆ. ಇನ್ನೇನು ಮದುವೆಯಾಗಬೇಕು ಎನ್ನುವಾಗಲೇ ಇಬ್ಬರ ಮದುವೆ ಮುರಿದು ಬಿದ್ದಿತ್ತಂತೆ. ಗೆಳೆಯನ ಅಗಲಿಕೆಯ ದುಃಖ ಸಿಮಿ ಅವರಿಗೆ ಕಾಡುತ್ತಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ವಿದಾಯ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment