Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರತನ್ ಟಾಟಾ ಮನಸ್ಸು ಕದ್ದಿದ್ದರು ಆ ಬಾಲಿವುಡ್ ನಟಿ : ಆದರೆ ಮದುವೆಯಾಗದಿರಲು ಕಾರಣವೇನು ಗೊತ್ತಾ..?

Facebook
Twitter
Telegram
WhatsApp

ರತನ್ ಟಾಟಾ ದೇಶ ಕಂಡ ಯಶಸ್ವಿ ಉದ್ಯಮಿ. ಇವರು ಉದ್ಯಮದಲ್ಲಿ ಯಶಸ್ಸು ಕಂಡಷ್ಟೇ ಜನರ ಮನಸ್ಸನ್ನು ಗೆಲ್ಲುವಲ್ಲಿಯೂ ಯಶಸ್ಸು ಕಂಡಿದ್ದಾರೆ. 86 ವರ್ಷಗಳ ಕಾಲ ಸಾರ್ಥಕ ಬದುಕನ್ನು ಕಂಡಿದ್ದವರು. ವಯೋಸಹಜ ಕಾಯಿಲೆಯಿಂದ ಜಗತ್ತನ್ನೇ ತೊರೆದಿದ್ದಾರೆ. ಆದರೆ ಇವರ ಯೌವ್ವನದ ಜಗತ್ತಿನಲ್ಲಿ ಪ್ರೀತಿ-ಪ್ರೇಮದ ಕುರುಹು ಇತ್ತು. ಬಾಲಿವುಡ್ ಆ ನಟಿ ಇವರ ಮನಸ್ಸನ್ನು ಕದ್ದಿದ್ದರು. ಇಂದು ಅವರ ನಿಧನಕ್ಕೆ ಮಾಜಿ ಪ್ರೇಯಸಿಯೂ ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಆ ಮಾಜಿ ಪ್ರೇಯಸಿ ಯಾರು ಗೊತ್ತಾ..?

ರತನ್ ಟಾಟಾ ಅವರು ಉದ್ಯಮದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ, ಯಶಸ್ಸು ಪಡೆದವರು. ಆದರೆ ಪ್ರೀತಿಯಲ್ಲಿ ಅದೇಕೋ ಅವರು ಯಶಸ್ಸು ಕಾಣಲೇ ಇಲ್ಲ. ಎರಡೆರಡು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೂ ಒಮ್ಮೆಯೂ ಸಕ್ಸಸ್ ಆಗಲಿಲ್ಲ. ಲಾಸ್ ಏಂಜಲೀಸ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಗಲೇ ರತನ್ ಟಾಟಾಗೆ ಲವ್ ಆಗಿತ್ತು. ಆಕೆಯನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಆದರೆ ಅಮೆರಿಕಾದ ಹುಡುಗಿಯಾಗಿದ್ದ ಕಾರಣ, ಭಾರತದಲ್ಲಿ ನೆಲೆಸಲು ಒಪ್ಪಿರಲಿಲ್ಲ. ಅಂದು ಆ ಪ್ರೀತಿ ಮುರಿದು ಬಿತ್ತು. ನಂತರ ರತನ್ ಟಾಟಾ ಅವರ ಮನಸ್ಸು ಕದ್ದಿದ್ದೇ ಬಾಲಿವುಡ್ ನ ಬೆಡಗಿ.

70-80 ದಶಕದಲ್ಲಿ ಬಾಲಿವುಡ್ ನಲ್ಲಿ ಸಿಮಿ ಗರೆವಾಲ್ ಫೇಮಸ್ ಆಗಿದ್ದರು. ಇವರ ಮೇಲೆ ರತನ್ ಟಾಟಾಗೆ ಲವ್ ಆಗಿತ್ತಂತೆ. ಒಂದಷ್ಟು ವರ್ಷಗಳ ಕಾಲ ಇಬ್ಬರು ಒಟ್ಟೊಟ್ಟಿಗೆ ಓಡಾಡಿಕೊಂಡು ಇದ್ದರು ಎಂಬ ಮಾತಿದೆ. ಇನ್ನೇನು ಮದುವೆಯಾಗಬೇಕು ಎನ್ನುವಾಗಲೇ ಇಬ್ಬರ ಮದುವೆ ಮುರಿದು ಬಿದ್ದಿತ್ತಂತೆ. ಗೆಳೆಯನ ಅಗಲಿಕೆಯ ದುಃಖ ಸಿಮಿ ಅವರಿಗೆ ಕಾಡುತ್ತಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ವಿದಾಯ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಜೆಪಿ ಸರ್ಕಾರ ಕೊಟ್ಟಿದ್ದ 2D ಬೇಡ, 2A ಬೇಕು : ಕಾಂಗ್ರೆಸ್ ಗೆ ಪಂಚಮಸಾಲಿ ಸ್ವಾಮೀಜಿ ಒತ್ತಾಯ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಹೋರಾಟಗಳು ನಡೆಯುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಂಬಂಧ ಸಭೆ ಕೂಡ ನಡೆಸಲಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಯತ್ನಾಳ್ ಕೂಡ ಭಾಗಿಯಾಗಲಿದ್ದಾರೆ. ಜಯ

ರಾಮನಗರದ ತೋಟದ ಮನೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್ : ಯೋಗೀಶ್ವರ್ ಸಮಾಧಾನಗೊಳಿಸಲು ನಿರ್ಧಾರ..!

    ರಾಮನಗರ: ಚನ್ನಪಟ್ಟಣ ಬೈಎಲೆಕ್ಷನ್ ವಿಚಾರ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ರೆ, ಜೆಡಿಎಸ್ ಲೆಕ್ಕಚಾರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೂ ಬಹಳ ಮುಖ್ಯವಾಗಿದೆ. ಇಲ್ಲಿ ಮೈತ್ರಿ

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ, ಕಡಲೆ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ…!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)    ಇಂದಿನ             

error: Content is protected !!