ಚಿತ್ರದುರ್ಗ : ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಹಾಗೂ ಭದ್ರತಾ ದೃಷ್ಟಿಯಿಂದ ಆರು ಜನ ಸಿವಿಲ್ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ಅನ್ಯಕರ್ತವ್ಯದ (ಒಒಡಿ) ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಠಾಣೆಗಳಿಗೆ ತಾತ್ಕಾಲಿಕವಾಗಿ ನಿಯೋಜಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ-ಐಜಿಪಿ) ಆದೇಶ ಹೊರಡಿಸಿದ್ದಾರೆ.
ಆಂತರಿಕ ಭದ್ರತಾ ವಿಭಾಗ, ಸಿಐಡಿ ಹಾಗೂ ಎಸ್ಸಿಆರ್ಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಗೆ ನಿಯೋಜಿಸಲಾಗಿದೆ.
ಯಾರಿಗೆ ಎಲ್ಲಿಗೆ ನಿಯೋಜನೆ?
ಮಂಜುನಾಥ ಡಿ.ಆರ್ – ಸಿ.ಐ.ಡಿ.ಯಿಂದ ಬಡಾವಣೆ ವೃತ್ತ, ಚಿತ್ರದುರ್ಗ ಜಿಲ್ಲೆ
ಗುರುಪ್ರಸಾದ್ ಜೆ – ಸಿ.ಐ.ಡಿ.ಯಿಂದ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆ
ಗಜೇಂದ್ರಪ್ಪ ಕೆ.ಎನ್ – ಆಂತರಿಕ ಭದ್ರತಾ ವಿಭಾಗದಿಂದ ಆಜಾದ್ ನಗರ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
ರಾಷ್ಟ್ರಪತಿ ಹೆಚ್.ಎಸ್ – ಆಂತರಿಕ ಭದ್ರತಾ ವಿಭಾಗದಿಂದ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
ಶ್ರೀನಿವಾಸ ಎಲ್ – ಆಂತರಿಕ ಭದ್ರತಾ ವಿಭಾಗದಿಂದ ತುರುವನೂರು ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆ
ಶರಣಪ್ಪ ಎಲ್ ಹಡ್ಲಿ – ಎಸ್ಸಿಆರ್ಬಿ ಬೆಂಗಳೂರಿನಿಂದ ಪೇಪರ್ ಟೌನ್ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ
ನಿಯೋಜಿತ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯುಕ್ತಿಗೊಂಡ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲು ಹಾಗೂ ಈ ಕುರಿತು ಪಾಲನಾ ವರದಿಯನ್ನು ಮುಖ್ಯ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಸೂಚನೆ ನೀಡಿದ್ದಾರೆ.












