ಧರ್ಮಸ್ಥಳದ ಪರ ನಿಂತ ತೆಲುಗು ನಟ : ಪವನ್ ಕಲ್ಯಾಣ್ ಏನಂದ್ರು..?

1 Min Read

ಧರ್ಮಸ್ಥಳದ ಸುದ್ದಿ ಈಗ ರಾಜ್ಯದ ಸುದ್ಸಿಯಾಗಿ ಉಳಿದಿಲ್ಲ. ದೇಶ ವ್ಯಾಪಿಯಲ್ಲಿಯೂ ಸದ್ದು ಮಾಡ್ತಿದೆ. ಇದೀಗ ತೆಲುಗು ನಟ ಪವನ್‌ ಕಲ್ಯಾಣ್ ಅವರು ಮಾತನಾಡಿದ್ದಾರೆ. ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ ಆರಂಭದಿಂದಲೂ ಹೊಸ ಟ್ವಿಸ್ಟಚ ಪಡೆದುಕೊಳ್ಳುತ್ತಲರೆ ಬರುತ್ತಿದೆ. ಇದೀಗ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನಿಂತಿದ್ದು, ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಆಗಮಿಸಲಿದ್ದಾರೆ.

ಧರ್ಮಸ್ಥಳಕ್ಕೆ ನಟ, ಡಿಸಿಎಂ ಪವನ್ ಕಲ್ಯಾಣ್ ಬರಲಿದ್ದಾರೆ. ಗುರುವಾರ ಅಂದ್ರೆ ಸೆಪ್ಟೆಂಬರ್ 11 ರಂದು ಪವನ್ ಕಲ್ಯಾಣ್ ಅವರು ವಿಶೇಷ ಸೇವೆ ಸಲ್ಲಿಸಲಿದ್ದಾರೆ. ಈ ಮೂಲಕ ಕ್ಷೇತ್ರದ ಅಪಪ್ರಚಾರ ವಿರುದ್ಧ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಇದೇ ವೇಳೆ ದೇವಸ್ಥಾನದ ಮುಂಭಾಗದಲ್ಲಿ ವಿಶೇಷ ಆರತಿ ಸೇವೆ ನಡೆಯಲಿದೆ.

ಸದ್ಯ ಧರ್ಮಸ್ಥಳದ ವಾತಾವರಣ ಸಹಜ ಸ್ಥಿತಿಗೆ ತಲುಪಿದೆ. ಮಾಸ್ಕ್‌ ಮ್ಯಾನ್ ಚಿನ್ನಯ್ಯನನ್ನ ಅರೆಸ್ಟ್ ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ. ಧರ್ಮಸ್ಥಳದ ವಿಚಾರಕ್ಕೆ ಯಾವುದೇ ಅಪಪ್ರಚಾರವಾಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಬಿಜೆಪಿ ಹಾಗುಇ ಜೆಡಿಎಸ್ ನಾಯಕರು ಧರ್ಮಯಾತ್ರೆಯನ್ನು ನಡೆಸಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಎಲ್ಲೆಡೆ ಭಕ್ತರು ಇದ್ದಾರೆ. ರಾಜ್ಯದ ಮಾತ್ರವಲ್ಲ ಬೇರೆ ರಾಜ್ಯದಲ್ಲೂ ಮಂಜುನಾಥನ ಭಕ್ತರಿದ್ದಾರೆ. ಹೀಗಾಗಿಯೇ ಧರ್ಮಸ್ಥಳದ ಬಗ್ಗೆ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಧ್ವನಿ ಎತ್ತಿದ್ದಾರೆ. ಗುರುವಾರ ಭೇಟಿ ಕೂಡ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

Share This Article
Enable Notifications OK No thanks