ಮಂಡ್ಯದಿಂದಾನೇ ಸುಮಲತಾ ಸ್ಪರ್ಧೆ, ಅಮ್ಮನಿಂದ ದೂರವಾಗೋಕೆ ಆಗುತ್ತಾ ಅಂದ್ರು ದರ್ಶನ್..!

suddionenews
1 Min Read

ಮಂಗಳೂರು: ಮಂಡ್ಯ ಚುನಾವಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕುತೂಹಲದ ಸ್ಪಾಟ್ ಆಗಿದೆ. ದಳಪತಿಗಳು ಮಂಡ್ಯ ಬಿಡಲ್ಲ, ಸುಮಲತಾ ಕೂಡ ಕಾಂಪ್ರೂಮೈಸ್ ಆಗಲ್ಲ. ಹೀಗಾಗಿ ಮಂಡ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಸುಮಲತಾ ಮಂಡ್ಯದಿಂದಾನೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದು, ಬಿಜೆಪಿಯಿಂದ ಟಿಕೆಟ್ ಸಿಗುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹೈವೋಲ್ಟೇಜ್ ಕಣವಾಗಿತ್ತು. ಆ ಸಂದರ್ಭದಲ್ಲಿ ದರ್ಶನ್ ಹಾಗೂ ಯಶ್ ಮಂಡ್ಯ ನೆಲಕ್ಕೆ ಎಂಟ್ರಿ ಕೊಟ್ಟಿದ್ದರು. ಸುಮಲತಾ ಅಮ್ಮನ ಪರವಾಗಿ ನಿಂತಿದ್ದರು. ಈ ಬಾರಿಯೂ ದರ್ಶನ್ ಹಾಗೂ ಯಶ್ ಬರ್ತಾರಾ ಪ್ರಚಾರಕ್ಕೆ ಎಂದು ಇತ್ತಿಚೆಗಷ್ಟೇ ಸುಮಲತಾ ಅವರನ್ನು ಕೇಳಿದ್ದಾಗ, ಕರೆಯುವುದು ಸರಿಯಲ್ಲ. ಬಂದರೆ ತುಂಬಾ ಖುಷಿ ಎಂದಿದ್ದರು. ಇದೀಗ ದರ್ಶನ್, ಈ ಬಾರಿಯೂ ಅಮ್ಮನ ಜೊತೆಗ ಇರ್ತೀನಿ, ಪ್ರಚಾರ ಮಾಡುತ್ತೀನಿ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ, ದರ್ಶನ ಪಡೆದ ಬಳಿಕ ಮಾತನಾಡಿದ ನಟ ದರ್ಶನ್, ಮಂಗಳೂರಿಗೆ ಸುಮಾರು ಸಲ ಬಂದಿದ್ದೇನೆ. ಆದರೆ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿರಲಿಲ್ಲ. ಹಾಗೇ ನೋಡಿಕೊಂಡು ಹೋಗೋಣಾ ಅಂತ ಬಂದೆ ಎಂದಿದ್ದಾರೆ. ಇದೇ ವೇಳೆ ಸುಮಲತಾ ಅವರ ಬೆಂಬಲದ ಬಗ್ಗೆ ಮಾತನಾಡಿ, ಅವರು ಅಮ್ಮ. ಅಮ್ಮನೆ. ನಾನು ಅವರೊಂದಿಗೇನೆ ಇರೋದು. ಬೇರೆ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಅಂದ್ರೆ ಅವರಿಂದ ದೂರವಾಗೋದಕ್ಕೆ ಆಗುತ್ತಾ..? ಕಳೆದ ಬಾರಿಯಂತೆ ಈ ಬಾರಿಯೂ ಅಮ್ಮನ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗಾದ್ರೆ ಈ ಬಾರಿ ಮಂಡ್ಯ ರಣಕಣದಲ್ಲಿ ದಾಸನ ಹವಾ ಜೋರಾಗಿಯೇ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *