Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸುದೀಪ್ ತಾಯಿ ಚಿಕಿತ್ಸೆ ಫಲಕಾರಿಯಾಗದೆ ನಿಧನ : ಸರೋಜಾ ಅವ್ರಿಗೆ ಏನಾಗಿತ್ತು..?

Facebook
Twitter
Telegram
WhatsApp

ಕಿಚ್ಚ ಸುದೀಪ್ ಅವರ ಮನೆಯಲ್ಲಿ ಮೌನ ಆವರಿಸಿದೆ.. ಮನಸ್ಸಿನ ತುಂಬಾ ತಡೆಯಲಾರದ ದುಃಖವಿದೆ.. ಕಣ್ಣಲ್ಲಿ ನೀರು ತುಂಬಿದೆ.. ಅಷ್ಟು ಪ್ರೀತಿ ಮಾಡುವ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸುದೀಪ್ ಅವರಿಗೆ ಮಾತೃ ವಿಯೋಗ ಕಾಡಿದೆ‌. ಸರೋಜಾ ಅವರು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಇಂದು ಬೆಳಗ್ಗೆ 7.40 ಕ್ಕೆ ನಿಧನರಾಗಿದ್ದಾರೆ.

ಸರೋಜಾ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತಿ ಸಂಜೀವ್, ಮಗ ಸುದೀಪ್, ಸುರೇಖಾ, ಸುಜಾತಾ ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ಒಳಗೆ ಅಂತ್ಯ ಸಂಸ್ಕಾರ ಮಾಡಲಿದ್ದಾರೆ.

ತಾಯಿಯನ್ನು ಕಳೆದುಕೊಂಡು ಸುದೀಪ್ ದುಃಖತಪ್ತರಾಗಿದ್ದಾರೆ. ಆಪ್ತರು, ಕನ್ನಡ ಚಿತ್ರರಂಗ, ಮಾಧ್ಯಮದವರು ಸುದೀಪ್ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ತಾಯಿಯ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿ ಸುದೀಪ್ ಅವರಿಗೆ ನೀಡಲೆಂದು ಕೇಳಿಕೊಂಡಿದ್ದು, ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಜ್ಜಿ ಎಂದರೆ ಮೊಮ್ಮಕ್ಕಳಿಗೆ ತುಂಬಾನೇ ಇಷ್ಟವಿತ್ತು. ಈಗ ಮೊಮ್ಮಕ್ಕಳ ಮುಂದೆ ಅಜ್ಜಿಯ ಪಾರ್ಥಿವ ಶರೀರವಿದೆ. ಆಡಿ ಬೆಳೆದ ಮೊಮ್ಮಕ್ಕಳಿಗೆ ಮಾತಾಡದೆ, ಉಸಿರಾಡದೆ, ತಬ್ಬದೆ ಮಲಗಿದ ದೇಹ ನೋಡುವುದು ಸುಲಭವಲ್ಲ. ಮೊಮ್ಮಕ್ಕಳಿಗೂ ಆ ದೇವರು ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದೇ ಎಲ್ಲರೂ ಹಾರೈಸುತ್ತಿದ್ದಾರೆ. ಜೆಪಿ ನಗರದ ನಿವಾಸಕ್ಕೆ 12 ಗಂಟೆಯಷ್ಟರಲ್ಲಿ ಪಾರ್ಥಿವ ಶರೀರ ಬರಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸುದೀಪ್ ತಾಯಿ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಾಘವೇಂದ್ರ ರಾಜ್‍ಕುಮಾರ್

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಇಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದಾರೆ. ಜೆಪಿ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಹಲವು ಗಣ್ಯರು ಸುದೀಪ್ ನಿವಾಸಕ್ಕೆ ಬಂದು ಅವರ ತಾಯಿಯ ಅಂತಿಮ

ಸುದೀಪ್ ತಾಯಿ ಚಿಕಿತ್ಸೆ ಫಲಕಾರಿಯಾಗದೆ ನಿಧನ : ಸರೋಜಾ ಅವ್ರಿಗೆ ಏನಾಗಿತ್ತು..?

ಕಿಚ್ಚ ಸುದೀಪ್ ಅವರ ಮನೆಯಲ್ಲಿ ಮೌನ ಆವರಿಸಿದೆ.. ಮನಸ್ಸಿನ ತುಂಬಾ ತಡೆಯಲಾರದ ದುಃಖವಿದೆ.. ಕಣ್ಣಲ್ಲಿ ನೀರು ತುಂಬಿದೆ.. ಅಷ್ಟು ಪ್ರೀತಿ ಮಾಡುವ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸುದೀಪ್ ಅವರಿಗೆ ಮಾತೃ ವಿಯೋಗ ಕಾಡಿದೆ‌.

ಈ ರಾಶಿಯವರಿಗೆ ಶತ್ರುಗಳ ಕಾಟ ಅಧಿಕ, ಈ ರಾಶಿಯವರಿಗೆ ಮದುವೆ ಶುಭ ಸೂಚನೆ

ಈ ರಾಶಿಯವರಿಗೆ ಶತ್ರುಗಳ ಕಾಟ ಅಧಿಕ, ಈ ರಾಶಿಯವರಿಗೆ ಮದುವೆ ಶುಭ ಸೂಚನೆ, ಈ ರಾಶಿಯ ದಂಪತಿಗಳಿಗೆ ಸಂತಾನ ಪ್ರಾಪ್ತಿ, ಭಾನುವಾರ- ರಾಶಿ ಭವಿಷ್ಯ ಅಕ್ಟೋಬರ್-20,2024 ಸೂರ್ಯೋದಯ: 06:14, ಸೂರ್ಯಾಸ್ತ : 05:47 ಶಾಲಿವಾಹನ

error: Content is protected !!