ಜೆಡಿಎಸ್ & ಕಾಂಗ್ರೆಸ್ ಕಳ್ಳ ನನ್ ಮಕ್ಕಳು ಎಂದ ಎಸ್ ಟಿ ಸೋಮಶೇಖರ್ : ದೂರು ನೀಡಿದ ಜೆಡಿಎಸ್

suddionenews
1 Min Read

ಬೆಂಗಳೂರು: ರಾಜಕೀಯ ಅಂದ್ರೇನೆ ಹಾಗೇ. ತಾವಿರುವ ಪಕ್ಷವನ್ನು ಹೊಗಳಿಕೊಂಡು, ವಿರೋಧ ಪಕ್ಷದವರ ಬಗ್ಗೆ ಯಾವಾಗಲೂ ನಿಂದಿಸುವುದು. ಸದ್ಯಕ್ಕೆ ರಾಜಕೀಯ ಎಂದರೆ ಹೆಚ್ಚು ಗಮನಕ್ಕೆ ಬರುವುದು ಇದೆ. ಆದರೆ ಹೀಗೆ ಆರೋಪ ಮಾಡುವಾಗಲೇ ಕೆಲವೊಬ್ಬರಿಂದ ಯಡವಟ್ಟುಗಳಾಗಿ ಬಿಡುತ್ತವೆ. ಈಗ ಸಚುವ ಎಸ್ ಟಿ ಸೋಮಶೇಖರ್ ಕಡೆಯಿಂದಾನೂ ಅದೇ ಆಗಿರುವುದು.

ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾಗಲೇ ಇಂಥದ್ದೊಂದು ಘಟನೆ ಜರುಗಿದೆ. ಜೆಡಿಎಸ್ ಆ ವಿಡಿಯೋ ಹಂಚಿಕೊಂಡಿದೆ. ಜೊತೆಗೆ ಎಸ್ ಟಿ ಸೋಮಶೇಖರ್ ಬಗ್ಗೆ ಮಾತನಾಡಿರುವ ಜೆಡಿಎಸ್, ಪಕ್ಷವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋದವರು ನೀವೂ‌. ಸಿದ್ದರಾಮಯ್ಯ, ಡಿಕೆಎಸ್ ವಿರುದ್ಧ ಬೆಂಗಳೂರು ಕೊಳ್ಳೆ ಹೊಡೆದವರು ಎಂದು ಆರೋಪಿಸುತ್ತೀರಿ. ಅಮೂಲ್ ಮತ್ತು ನಂದಿನಿ ವಿಲೀನದ ಬಗ್ಗೆ ಮಾತನಾಡಿದ್ದಕ್ಕೆ ನಮ್ಮನ್ನು ಕಳ್ ನನ್ನಮ್ಮಕ್ಕಳು ಎನ್ನುತ್ತೀರಿ.

ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಚುನಾವಣಾ ಆಯೋಗವೂ ಕ್ರಮ ತೆಗೆದುಕೊಳ್ಳಲಿದೆ. ಸೋಮಶೇಖರ್ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ತಾವೂ ಮತದಾರರಿಗೆ ಹಣ ಹಂಚಿಕೆ ಮಾಡಿರುವ ಬಗ್ಗೆ ಮಾತನಾಡಿದ್ದಾರೆ. ಬಿರಿಯಾನಿ ಬಗ್ಗೆಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಜೆಡಿಎಸ್, ಕಾಂಗ್ರೆಸ್ ನವರನ್ನು ಜೈಲಿಗೆ ಕಳುಹಿಸುವ ಬಗ್ಗೆಯೂ ಮಾತನಾಡಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks