ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಶುರುವಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ, ಪೆನ್ ಗಳನ್ನು ನೀಡಿ ಶುಭಕೋರಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಆಗಬಾರದೆಂದು ಎಚ್ಚರಿಕೆಯನ್ನು ವಹಿಸಿದ್ದಾರೆ.
ಪರೀಕ್ಷಾ ಕೇಂದ್ರದ ಬಳಿಯೇ ಈ ಬಗ್ಗೆ ಮಾತನ್ನಾಡಿದ್ದಾರೆ. ನಿನ್ನೆಗೆ ಪಿಯುಸಿ ಪರೀಕ್ಷೆ ನಡೆದಿದೆ. ಎಲ್ಲವೂ ಸುಸಜ್ಜಿತವಾಗಿ ನಡೆದಿದೆ. ಯಾವುದೇ ಥರದ ತೊಂದರೆಗಳು ಆಗದೆ ಇರುವ ರೀತಿ ಜವಾಬ್ದಾರಿಯನ್ನು ತೆಗೆದುಕೊಂಡು ಮಾಡಿದ್ದೇವೆ. ಅದು ಒಂದು ಭಾಗ. ಇನ್ನೊಂದು ಭಾಗ ಇವತ್ತಿನಿಂದ ಅಂದ್ರೆ ಮಾರ್ಚ್ 18ರಿಂದ ಏಪ್ರಿಲ್ 2ನೇ ತಾರೀಖಿನ ತನಕ ಎಸ್ಎಸ್ಎಲ್ಸಿ ಪರೀಕ್ಷೆ ರಾಜ್ಯ ಮಟ್ಟದಲ್ಲಿ ಎಲ್ಲಾ ಕಡೆಯಲ್ಲೂ ನಡೆಯುತ್ತದೆ.. ಸುಮಾರು 15 ಸಾವಿರಕ್ಕೂ ಹೆಚ್ಚು ಶಾಲೆಗಳು, 2,800 ಕೇಂದ್ರದಲ್ಲಿ ಇವತ್ತು ಪರೀಕ್ಷೆ ನಡೆಯುತ್ತಾ ಇದೆ.
ಸುಮಾರು 8,69,000 ಲಕ್ಷ ಮಕ್ಕಳು ಪರೀಕ್ಷೆಯನ್ನ ಬರೀತಾ ಇದ್ದಾರೆ. ರಿಪೀಟರ್ಸ್, ಪ್ರೈವೇಟ್ ಸ್ಟುಡೆಂಟ್ ಎಲ್ಲಾ ಸೇರಿದ್ರೆ 9,6,000 ಮಕ್ಕಳು ಎಕ್ಸಾಂ ತೆಗೆದುಕೊಳ್ತಾ ಇದ್ದಾರೆ. ನಾವೂ ಈ ವರ್ಷ ಮೊದಲಿನಿಂದಾನೇ ಏನೆಲ್ಲಾ ಕೆಲಸಗಳನ್ನು ಮಾಡುದ್ವಿ ಮಕ್ಕಳು ಅದನ್ನೇ ಹೇಳಿದ್ರು. ತಂದೆ ತಾಯಂದಿರಿಗೆ ಟೆನ್ಶನ್, ಮಕ್ಕಳಿಗೆ ಟೆನ್ಶನ್, ಇಲಾಖೆಯಿಂದ ನಮಗೆ ಟೆನ್ಶನ್. ಕ್ಷೆಷನ್ ಬ್ಯಾಂಕಿಂಗ್, ಪ್ರಿಪರೇಟರಿ ಎಲ್ಲವೂ ಮಕ್ಕಳಿಗೆ ಬಹಳ ಸಹಾಯವಾಗಿದೆ. ಬಹಳ ಖುಷಿಯಾಗಿಯೇ ನಾವೂ ಪರೀಕ್ಷೆ ಬರೆಯೋದಕ್ಕೆ ಹೋಗ್ತಾ ಇದ್ದೀವಿ ಅಂತ ಮಕ್ಕಳು ಹೇಳಿದ್ರು. ಇದು ನಮಗೆ ಬಹಳ ಖುಷಿ ಕೊಡ್ತು. ಇಡೀ ರಾಜ್ಯದಲ್ಲಿ ಎಲ್ಲಾ ಮಕ್ಕಳಿಗೂ ಈ ಮೂಲಕ ಶುಭಕೋರುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















