ನಾರಸಿಂಹ ದಯೆ ತೋರೋ
ಸ್ವಾಮಿ ನಾರಸಿಂಹ ದಯೆ ತೋರೋ॥
ಭಕ್ತ ಪ್ರಹ್ಲಾದನ ಕರೆಗೆ ನೀ ಬಂದೆ
ದುರುಳ ರಕ್ಕಸನ ಕರುಳನು ಬಗೆದೆ
ನಂಬಿದ ಭಕ್ತರ ಕರುಣಿಸಿ ಕಾಯ್ದೆ
ಪೂಜೆಯ ಮಾಡಲು ನಾ ಬಳಿ ಬಂದೆ॥
ಮೇಲುಕೋಟೆಯಲಿ ಯೋಗಾನೃಸಿಂಹನಾಗಿ
ಅಹೋಬಿಲದಲಿ ನವನಾರಸಿಂಹರಾಗಿ
ಯಾದಗಿರಿಯಲಿ ಲಕ್ಷ್ಮಿ ನರಸಿಂಹ ನಾಗಿ
ನೆಲೆಸಿಹೆ ನೀನು ಭಕ್ತರಿಗಾಗಿ॥
ನಿನ್ನನು ಸ್ಮರಿಸಲು ಮನಕಾನಂದ
ನಿನ್ನನು ಸ್ತುತಿಸಲು ಮಹದಾನಂದ
ಭಜನೆಯ ಮಾಡಲು ಆತ್ಮಾನಂದ
ದರುಶನ ಭಾಗ್ಯವೇ ದಿವ್ಯಾನಂದ॥
ಶ್ರೀಮತಿ ಸುಜಾತ ಪ್ರಾಣೇಶ್, ಚಿತ್ರದುರ್ಗ 99861 53163