ಅನಾರೋಗ್ಯದಿಂದ ಗುಣಮುಖರಾಗಿ ಮನೆಗೆ ಬಂದಿದ್ದ ದಂಪತಿಗೆ ಹಾವು ಕಡಿತ : ಮಗು ಸಾವು..!

suddionenews
1 Min Read

ಹೈದರಾಬಾದ್: ವಿಧಿ ಅನ್ನೋದು ಎಷ್ಟು ಕ್ರೂರವಾಗಿರುತ್ತೆ. ಮಕ್ಕಳೆಂದರೆ ತಂದೆ ತಾಯಿಗೆ ಇನ್ನಿಲ್ಲದ ಆಸೆ ಕನಸು. ಆದ್ರೆ ವಿಧಿ ಆ ಮಗುವನ್ನ ಹಾಗೇ ಕರೆದುಕೊಂಡು ಹೋಗ್ಬಿಟ್ರೆ ಹೇಗಾಗಬೇಡ. ಅಂಥದ್ದೊಂದು ಕ್ರೂರ ಘಟನೆ ಮಹಬೂಬಾದ್ ನಗರದ ಶನಿಗಪುರಂನಲ್ಲಿ ನಡೆದಿದೆ.

ಕ್ರಾಂತಿ ಮತ್ತು ಮಮತಾ ಎಂಬ ದಂಪತಿಗೆ ಮಗು ಇತ್ತು. ಅದಕ್ಕೆ ಇನ್ನು ಮೂರು ತಿಂಗಳು ಮಾತ್ರ. ಆದ್ರೆ ವಿಧಿ ಎಷ್ಟು ಕ್ರೂರ ಅಂದ್ರೆ ಆ ಮೂರು ತಿಂಗಳ ಮಗುವನ್ನು ಬಲಿ ಪಡೆದಿದೆ.

ಮಗುವಿಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದುಕೊಂಡು ಬಂದಿದ್ರು. ಆದ್ರೆ ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೇ ಮಗು ಬಾಯಲ್ಲಿ ನೊರೆ ಬರ್ತಾ ಇತ್ತು. ಪೋಷಕರಿಬ್ಬರು ಮಗುವಿಗೆ ಹೊದಿಸಿದ್ದ ಹೊದಿಕೆ ತೆಗೆದು ನೋಡಿದಾಗ ಅದರಲ್ಲಿ ಹಾವು ಇದ್ದದ್ದು ನೋಡಿ ಗಾಬರಿಯಾಗಿದ್ದಾರೆ.

ಜೊತೆಗೆ ತಕ್ಷಣ ಅಪ್ಪ-ಅಮ್ಮನಿಗೂ ಹಾವು ಕಚ್ಚಿದೆ. ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಮಗು ದಾರಿ‌ ಮಧ್ಯೇಯೇ ಸಾವನ್ನಪ್ಪಿದೆ.

Share This Article
Leave a Comment

Leave a Reply

Your email address will not be published. Required fields are marked *