75 ವರ್ಷದಿಂದ ಮೇಲ್ಜಾತಿಗೆ ಜೈ ಅಂದಿದ್ದೇ ಆಯ್ತು, ದಲಿತರ ಪರವಾಗಿ ಯಾರೂ ಕೈ ಎತ್ತಿಲ್ಲ : ರಮೇಶ್ ಜಿಗಜಣಗಿ ಬೇಸರ

suddionenews
1 Min Read

ವಿಜಯಪುರ: ದಲಿತರ ಪರವಾಗಿ ಯಾರೂ ಸಹ ಮಾತನಾಡಲ್ಲ ಎಂದು ಸಂಸದ ಜಿಗಜಣಗಿ ಬೇಸರ ಹೊರ ಹಾಕಿದ್ದಾರೆ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡ ದೊಡ್ಡ ಗೌಡರು, ಸಾಹುಕಾರುಗಳು ಬಂದರು. ಅವರ ಪರವಾಗಿ ನಾವೂಗಳು ಕೈಎತ್ತುತ್ತಲೇ ಇದ್ದೇವೆ. ಆದರೆ ನಮ್ಮ ಪರವಾಗಿ ಯಾರೂ ಕೈ ಎತ್ತುವುದಿಲ್ಲ. ನಾವೂ ದಲಿತರು. ನಮ್ಮ ಪರವಾಗಿ ಯಾರೂ ಕೈ ಎತ್ತಲ್ಲ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನಾವಂತು ನೇಮಕ ಮಾಡಿಲ್ಲ. ಪಕ್ಷದ ಹಿರಿಯರು ಯಾವುದ್ಯಾವುದೋ ಕಾರಣಕ್ಕೆ ನೇಮಕ ಮಾಡಿದ್ದಾರೆ. ಬಹಳ ಯೋಚಿಸಿ ಯಡಿಯೂರಪ್ಪ ಅವರ ಮಗನೇ ಆಗಬೇಕೆಂದು ನೇಮಕ ಮಾಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿರುವುದು ನಮಗೇನು ಹೊಟ್ಟೆ ಉರಿ ಇಲ್ಲ. ನಾನೇ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕೆಂದು ನಾನಂತು ಅಂದುಕೊಂಡಿಲ್ಲ. ಆದರೆ ದಲಿತರಿಗೆ ಕೊಡಬೇಕು ಎಂಬುದು ನನ್ನ ಆಶಯ. ಆದರೆ ದಲಿತರ ಪರವಾಗಿ ಯಾರೂ ಕೈ ಎತ್ತುವುದಿಲ್ಲ. ಇದು ಬಹಳ ದುಃಖದ ಸಂಗತಿ ಎಂದಿದ್ದಾರೆ.

 

ಬಿಜೆಪಿಯಲ್ಲಿ ಸದ್ಯ ಅಸಮಧಾನ ಹಿಗೆ ಜೋರಾಗಿಯೇ ಆಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಹಲವು ಹಿರಿಯ ನಾಯಕರೆ ಇದ್ದರು. ಆದರೆ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯಡಿಯೂರಪ್ಪ ಅವರಿಗೆ ಬಿಜೆಪಿ ಮಣೆ ಹಾಕಿದೆ. ಹೀಗಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೇ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಇದರಿಂದ ಈಶ್ವರಪ್ಪ ಸೇರಿದಂತೆ ಹಲವರಿಗೆ ಬೇಸರವಾಗಿದೆ. ಇದೀಗ ಸಂಸದ ಜಿಗಜಣಗಿ ಕೂಡ ಬೇಸರ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *