Siddaramaiah: 4-5 ಗಂಟೆಗೆ ಮುಗಿಯಬೇಕಿದ್ದ ವಿಚಾರಣೆ : ಸಿದ್ದರಾಮಯ್ಯ ಆಕ್ರೋಶ

suddionenews
1 Min Read

 

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ರಾಜ್ಯದ ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸಿ ದೆಹಲಿಗೆ ಹೋಗಿದ್ದಾರೆ. ಅಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಕಿರುಕುಳವನ್ನು ನಾವೂ ವಿರೋಧಿಸ್ತಾ ಇದ್ದೇವೆ. ನಾವೆಲ್ಲಾ ಅವರ ಜೊತೆ ಇದ್ದೇವೆ ಎಂಬುದನ್ನು ತೋರಿಸುವುದಕ್ಕೆ ಇಲ್ಲಿಗೆ ಬಂದಿದ್ದೇವೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ವೇಳೆ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಭಟನೆಯಲ್ಲಜ ಭಾಗವಹಿಸಿರುವ ಸಿದ್ದರಾಮಯ್ಯ ಅವರು ಮಾತನಾಡಿದ್ದು, ನನ್ನ ಪ್ರಕಾರ 4-5 ಗಂಟೆ ಕೇಸ್ ವಿಚಾರಣೆ ಮಾಡಬೇಕು. ಆದರೆ 54 ಗಂಟೆ ವಿಚಾರಣೆ ಮಾಡಿದ್ದಾರೆ. ಇದನ್ನು ಏನು ಎನ್ನಬೇಕು. ಸುಮ್ಮ ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಸಿಟಿ ರವಿ ನೀಡಿದ ಸಿದ್ದರಾಮಯ್ಯ ಹೇಳೋದೆಲ್ಲ ಸುಳ್ಳು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಸುಳ್ಳು ಹುಟ್ಟಿರುವುದೇ ಆರ್ಎಸ್ಎಸ್ ನಿಂದ. ಸುಳ್ಳು ಇದ್ದರೆ ಅವರಿಂದಲೇ. ರವಿ ಆರ್ ಎಸ್ ಎಸ್ ಟ್ರೈನಿಂಗ್ ಆಗಿರುವುದರಿಂದ ಹಿಂಗೆಲ್ಲಾ ಹೇಳ್ತಾರೆ. ತಮ್ಮ ಮೇಲಿನ ಆರೋಗಳನ್ನು ಮುಚ್ಚಿ ಹಾಕಲು ಈ ರೀತಿಯೆಲ್ಲಾ ಮಾತಾಡುತ್ತಾರೆ ಎಂದಿದ್ದಾರೆ. ಇನ್ನು ಈ ಪ್ರತಿಭಟನೆಯ ಬಳಿಕ ಅಗ್ನಿಪಥ್ ವಿರುದ್ಧ ಪ್ರತಿಭಟನೆ ಮಾಡ್ತೀವಿ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *