ಸ್ವಾತಂತ್ರ್ಯಕ್ಕಾಗಿ ಬಿಜೆಪಿಗರು ಬಲಿದಾನ ಮಾಡಿದ್ದಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಹುಟ್ಟಿರಲಿಲ್ಲ, ಮಾಡಿಲ್ಲ ಎಂದ ಬಿ ಎಲ್ ಸಂತೋಷ್..!

suddionenews
1 Min Read

ಮಂಗಳೂರು: ಗಾಂಧೀಜಿ ವಿಚಾರದಲ್ಲಿ ಹೆಚ್ಚು ಪಾಪ ಮಾಡಿದ್ದೇ ಕಾಂಗ್ರೆಸ್ ಅಂತ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಯಾರಾದ್ರೂ ಬಲಿದಾನ ಮಾಡಿದ್ದಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಬಿ ಎಲ್ ಸಂತೋಷ್, ಆ ಸಮಯದಲ್ಲಿ ನಾವೂ ಹುಟ್ಟಿರಲಿಲ್ಲ. ಬಲಿದಾನ ಮಾಡಿಲ್ಲ. ಬಲಿದಾನ ಮಾಡುವ ಅವಕಾಶವಿದ್ದರೆ ನಮ್ಮ ಸಂಘಟನೆಯವರು ಮಾಡುವಷ್ಟು ಬಲಿದಾನವನ್ನ ಬೇರೆ ಯಾರು ಮಾಡುತ್ತಿರಲಿಲ್ಲ. ಸಿದ್ದರಾಮಯ್ಯ ಅವರಿಗೆ ಇದು ಅರ್ಥವಾಗೋದಿಲ್ಲ.

ಆಗ ಹುಟ್ಟಿದ್ದ ಕಾಂಗ್ರೆಸ್ ಎಷ್ಟು ಬಲಿದಾನ ಮಾಡಿದೆ..? ಗಾಂಧೀಜಿ ಹೆಸರಿನಲ್ಲಿ ಅಂಗಡಿ ಇಟ್ಟುಕೊಂಡಿದೆ. ಅವರ ಹೆಸರಿನಲ್ಲಿ ಹೆಚ್ಚು ಪಾಪ ಮಾಡಿದ್ದೇ ಈ ಕಾಂಗ್ರೆಸ್. ತುರ್ತು ಪರಿಸ್ಥಿತಿ ರಾಜಕೀಯ ಪ್ರತಿನಿಧಿಗಳಿಗೆ ಜೀವ ತುಂಬಿದ್ದೇ ಆರ್ ಎಸ್ ಎಸ್, ಬಿಜೆಪಿ. ಪ್ರಜಾಪ್ರಭುತ್ವದಲ್ಲಿ ಅವರನ್ನು ಜೀವಂತವಾಗಿಟ್ಟವರೇ ನಾವು. ಕಾಂಗ್ರೆಸ್ ನವರು ಇದನ್ನ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *