ನಮ್ಮ ಮೊಮ್ಮಕ್ಕಳು, ಮರಿ ಮಕ್ಕಳಿಗಾಗಿಯಾದ್ರೂ ಹೋರಾಟ ಮಾಡಬೇಕಿದೆ : ಸಾಧುಕೋಕಿಲ

suddionenews
1 Min Read

 

ರಾಮನಗರ: ಇಂದು ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಯ ಪಾದಯಾತ್ರೆ ಆರಂಭಿಸಿದ್ದು, ಈ ಪಾದಯಾತ್ರೆಗೆ ಕನ್ನಡ ಚಿತ್ರರಂಗ ಕೂಡ ಸಾಥ್ ನೀಡಿದೆ. ಸಾಧುಕೋಕಿಲ, ದುನಿಯಾ ವಿಜಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಪಾದಯಾತ್ರೆ ಬಗ್ಗೆ ಮಾತನಾಡಿದ ಸಾಧುಕೋಕಿಲ, ಈ ಯೋಜನೆಗೆ ಎಲ್ಲರ ಸಹಕಾರ ತುಂಬಾ ಮುಖ್ಯ. ನಮಗಾಗಿ ನಮ್ಮ ಮಕ್ಕಳಿಗಾಗಿ ಅಲ್ಲದೆ ಇದ್ದರು, ನಮ್ಮ ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗಾಗಿಯಾದ್ರೂ ಈ ಯೋಜನೆಗೆ ಸಹಕಾರಿಯಾಗಬೇಕು. ಮುಂದೆ ಅವರೆಲ್ಲಾ ಯಾರಲ್ಲಿಯೋ ನೀರಿಗಾಗಿ ಕೈಚಾಚೋದು ಬೇಡ ಎಂಬುದು ನಮ್ಮ ಮನಸ್ಥಿತಿಯಾದ್ರೆ ನಾವೂ ಈ ಹೋರಾಟ ಮಾಡಲೇ ಬೇಕು ಎಂದಿದ್ದಾರೆ.

ನಮ್ಮ ಚಿತ್ರರಂಗದವರಿಗೂ ನೀರಿನ ಬಗ್ಗೆ ಅರಿವಿದೆ. ಹೀಗಾಗಿ ಎಲ್ಲರೂ ಸಹಕಾರ ನೀಡುತ್ತಾರೆ. ನಮ್ಮಲ್ಲಿ ಒಗ್ಗಟ್ಟಿದೆ. ಆದ್ರೆ ಎಲ್ಲರೂ ಸೇರಿ ಚರ್ಚೆ ಮಾಡಿ ಮುಂದುವರೆಯುತ್ತಿಲ್ಲ. ಇಲ್ಲಿ ನಾಯಕತ್ವದ ಕೊರತೆಯೂ ಇರಬಹುದು. ನಾಯಕತ್ವದ ಕೊರತೆಯನ್ನ ಶಿವಣ್ಣ ನೀಗಿಸಲಿ. ಆದ್ರೆ ನೀರಿಗಾಗಿ ಎಲ್ಲರೂ ಒಗ್ಗೂಡುತ್ತಾರೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *