ದಾವಣಗೆರೆ: ದಕ್ಷಿಣ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ಗೆಲ್ಲುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಸಮರ್ಥ್ ಶಾಮನೂರು ಮುನ್ನಡೆಯನ್ನ ಸಾಧಿಸಿಕೊಂಡು ಬಂದಿದ್ದಾರೆ. ಏಳು ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಸತತ ಐದು ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸಮರ್ಥ್ ಶಾಮನೂರು 44,025 ಮತಗಳ ಮುನ್ನಡೆ ಇದೆ.
ಇನ್ನು ಶ್ರೀನಿವಾಸ್ ದಾಸಕರಿಯಪ್ಪ ಅವರು 35,215 ಮತಗಳನ್ನು ಪಡೆದು ಸುಮಾರು 8,810 ಮತಗಳ ಹಿನ್ನಡೆಯನ್ನು ಅನುಭವಿಸ್ತಾ ಇದ್ದಾರೆ. ಈ ಮೂಲಕ ಸಮರ್ಥ್ ಗೆಲುವಿನ ಸನಿಹದಲ್ಲಿದ್ದಾರೆ. ಮುಸ್ಲಿಂ ಮತಗಳು ಸ್ವಲ್ಪ ಗೊಂದಲವಾಗಿವೆ ಎಂಬ ಅನುಮಾನದಲ್ಲಿಯೇ ಕಾಂಗ್ರೆಸ್ ಪಕ್ಷ ಇತ್ತು. ಸೋಲುವ ಭೀತಿಯೂ ಕಾಂಗ್ರೆಸ್ ನಲ್ಲಿ ಕಾಣಿಸ್ತಾ ಇತ್ತು. ಆದರೆ ಸದ್ಯದ ಮತ ಎಣಿಕೆ ನೋಡಿದರೆ ಸಮರ್ಥ್ ಗೆಲುವು ಅಷ್ಟೇನು ಕಷ್ಟ ಅಲ್ಲ ಎಂಬ ಲೆಕ್ಕಚಾರಗಳು ಕಾಣಿಸ್ತಾ ಇದೆ.









