Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೂ. 868.90 ಲಕ್ಷ ವಿದ್ಯುತ್ ಬಿಲ್ ಬಾಕಿ ; ಏಳು ದಿನ ಗಡುವು

Facebook
Twitter
Telegram
WhatsApp

ಚಿತ್ರದುರ್ಗ,(ಜೂನ್.13) : ಚಿತ್ರದುರ್ಗ ಬೆಸ್ಕಾಂ ಗ್ರಾಮೀಣ ಉಪವಿಭಾಗದ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳಿಂದ ಮೇ-2022ರ ಅಂತ್ಯಕ್ಕೆ ಬರಬೇಕಾದ ವಿದ್ಯುತ್ ಶುಲ್ಕದ ಬಾಕಿ ಮೊತ್ತ ರೂ. 868.90 ಲಕ್ಷವನ್ನು 7 ದಿನಗಳ ಒಳಗಾಗಿ ಪಾವತಿಸುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕೋರಲಾಗಿದೆ.

2022ರ ಮೇ ಅಂತ್ಯಕ್ಕೆ ಚಿತ್ರದುರ್ಗ ಬೆವಿಕಂ ವಿಭಾಗದ ವ್ಯಾಪಿಗೆ ಬರುವ ಗ್ರಾಮ ಪಂಚಾಯ್ತಿಗಳಾದ ದ್ಯಾಮವ್ವನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 5.6ಲಕ್ಷ, ಮುದ್ದಾಪುರ 11.70ಲಕ್ಷ, ಎಂ.ಕೆ.ಹಟ್ಟಿ 3.10 ಲಕ್ಷ, ಆಲಘಟ್ಟ 45.30ಲಕ್ಷ, ಅನ್ನೇಹಾಳ್ 8.60ಲಕ್ಷ, ಬೆಳಘಟ್ಟ 146.50 ಲಕ್ಷ, ಭರಮಸಾಗರ 57 ಲಕ್ಷ, ಭೀಮಸಮುದ್ರ 17 ಲಕ್ಷ, ಬ್ಯಾಲಾಳ್ 5 ಲಕ್ಷ, ಚಿಕ್ಕಬೆನ್ನೂರು 38.70ಲಕ್ಷ, ಚೋಳಘಟ್ಟ 16.90ಲಕ್ಷ, ಗೋಡಬನಾಳ್ 27 ಲಕ್ಷ, ಗೋನೂರು 5.50 ಲಕ್ಷ, ಹುಲ್ಲೂರು 71ಲಕ್ಷ, ಇಸಾಮುದ್ರ 49.40ಲಕ್ಷ, ಐನಹಳ್ಳಿ 12.90ಲಕ್ಷ, ಜಾನುಕೊಂಡ 39.50ಲಕ್ಷ, ಕಾಲ್ಗೆರೆ 21.10ಲಕ್ಷ, ಕೋಗುಂಡೆ 26.70ಲಕ್ಷ, ಕೋಳಹಾಳ್ 29.50ಲಕ್ಷ, ಕೂನಬೇವು 25.40ಲಕ್ಷ, ಲಕ್ಷ್ಮೀಸಾಗರ-14.20ಲಕ್ಷ, ಸಿದ್ದಾಪುರ-ರೂ.34.50ಲಕ್ಷ, ಸಿರಿಗೆರೆ-ರೂ.15.40ಲಕ್ಷ, ಸೊಂಡೆಕೊಳ-ರೂ.36.80ಲಕ್ಷ, ತುರುವನೂರು-ರೂ.75.90ಲಕ್ಷ, ಯಳಗೋಡು 28.70 ಲಕ್ಷದಷ್ಟು ಬಾಕಿ ಮೊತ್ತವನ್ನು ಉಳಿಸಿಕೊಂಡಿದೆ.

7 ದಿನಗಳ ಒಳಗೆ ಬಾಕಿ ಹಣ ಪಾವತಿಸದಿದ್ದಲ್ಲಿ  ಕುಡಿಯುವ ನೀರು ಮತ್ತು ಬೀದಿ ದೀಪ ವಿದ್ಯುತ್  ಸ್ಥಾವರಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಬೆಸ್ಕಾಂ ಕಂಪನಿ ಜವಾಬ್ದಾರಿಯಾಗಿರುವುದಿಲ್ಲ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಹಾಗೂ ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಎಸ್ಕ್ರೋ ಖಾತೆಯಲ್ಲಿ ಮತ್ತು ಇ-ಗ್ರಾಮ್ ಸ್ವರಾಜ್ ತಂತ್ರಾಂಶದ ಮುಖಾಂತರ ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ಮೊತ್ತವನ್ನು  ಬೆಸ್ಕಾಂ ಪಾವತಿಸುವಂತೆ ಚಿತ್ರದುರ್ಗ ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!