Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಕೇಸ್ : ತನಿಖಾಧಿಕಾರಿಗಳಿಂದ ನಡೀತಾ ಯಡವಟ್ಟು..?

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಗಳು ಜೈಲುಬಪಾಲಾಗಿದ್ದಾರೆ. ಸಾಕ್ಷಿಗಳ ಟ್ರಯಲ್ ನಡೆಯುತ್ತಾ ಇದ್ದು, ಆರೋಪಿಗಳು ಸಹ ಆತಂಕದಲ್ಲಿಯೇ ಇದ್ದಾರೆ. ಇದರ ನಡುವೆ ಮಹತ್ವದ ಟ್ವಿಸ್ಟ್ ಒಂದು ಸಿಕ್ಕಿದೆ. ಅದುವೆ ತನಿಖಾಧಿಕಾರಿಯೊಬ್ಬರು ಯಡವಟ್ಟು ಮಾಡಿರೋದು. ತನಿಖಾಧಿಕಾರಿ ಗಿರೀಶ್ ನಾಯಕ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳನ್ನು ಟೈಲ್ಸ್ ಇರುವ ಕ್ಯಾಬಿನ್ ನಲ್ಲಿ ಫೋಟೋ ತೆಗೆಯಲಾಗಿತ್ತಂತೆ. ಆದರೆ ಕಾಮಾಕ್ಷಿ ಪಾಳ್ಯದಲ್ಲಿ ಆ ರೀತಿಯ ಟೈಲ್ಸ್ ಇಲ್ಲ ಎಂದು ಹೇಳಲಾಗ್ತಾ ಇದೆ. ಈ ಸಂಬಂಧ ಐಒ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಕ್ಕೆ ಮುಂದಾಗಿದ್ದಾರೆ. ಸಿಸಿಹೆಚ್ ಕೋರ್ಟ್ ಗೆ ವಕೀಲ ಡಿಎಸ್ ಸುದನ್ವ ಅರ್ಜಿಯನ್ನ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಕೆ ಮಾಡಿ ಕೋರ್ಟ್ ನಲ್ಲಿ ವಕೀಲ ಡಿಎಸ್ ಸುದನ್ವ ವಾದವನ್ನು ಮಂಡನೆ ಮಾಡಿದ್ದಾರೆ. ಪೊಲೀಸರಿಂದ ಮೊಬೈಲ್ ಮಹಜರು ಮಾಡುವಂತೆ ಸಂದರ್ಭದಲ್ಲಿ ಈ ಯಡವಟ್ಟನ್ನ ಮಾಡಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಹಜರು ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಕೋರ್ಟ್ ಗೆ ಮಹಜರು ಕಾಪಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳನ್ನ ಟೈಲ್ಸ್ ಹಾಕಿದ ಕ್ಯಾಬಿನ್ ನಲ್ಲಿ ಫೋಟೋಗಳನ್ನ ತೆಗೆಯಲಾಗಿತ್ತು. ಆದರೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಟೈಲ್ಸ್ ಹಾಕಿರುವ ಕೋಣೆಯೇ ಇಲ್ಲ ಅಂತ ವಾದವನ್ನು ವಕೀಲರು ಮಂಡಿಸಿದ್ದಾರೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ನೀಡುವುದಕ್ಕೆ ಕೋರ್ಟ್ ಆದೇಶವನ್ನ ನೀಡಿದೆ. ವಕೀಲರ ಎದುರೇ ಇದರ ವಿಚಾರಣೆ ನಡೆಯಲಿದೆ. ಅಲ್ಲಿರೋದು ಗ್ರೇ ಟೈಲ್ಸ್. ಇದರ ಅರ್ಥ ಏನು ಅಂದ್ರೆ ಆರೋಪಿಗಳನ್ನ ಸುಳ್ಳಾಗಿ ಸಿಗಿಸಬೇಕು ಅಂತ ಸೃಷ್ಟಿ ಮಾಡಿರೋದು ಅಂತ ವಕೀಲ ಸುದನ್ವ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...