ಕೆಲವು ಸಚಿವರು ನಮ್ಮಿಂದಲೇ ಸರ್ಕಾರ ಎಂದುಕೊಂಡಿದ್ದಾರೆ : ರೇಣುಕಾಚಾರ್ಯ ಗರಂ

suddionenews
1 Min Read

 

ಬೆಂಗಳೂರು: ಶಾಸಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಾಸಕ ರೇಣುಕಾಚಾರ್ಯ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ನಳೀನ್ ಕುಮಾರ್ ಕಟೀಲ್ ಅವರಿಗೆ ಮೌಖಿಕ ದೂರು ನೀಡಿದ್ದಾರೆ.

ಕೆಲವು ಸಚಿವರು ನಮ್ಮಿಂದಲೇ ಸರ್ಕಾರ ಎಂದುಕೊಂಡಿದ್ದಾರೆ. ದುರಹಂಕಾರದ ವರ್ತನೆ ಪ್ರದರ್ಶಿಸಿದ್ದಾರೆ. ಸಚಿವರು ಅಹವಾಲು ನೀಡಿದ್ರೆ ಕೆಲವು ಸಚಿವರು ಸ್ವೀಕರಿಸುವುದೇ ಇಲ್ಲ. ಶಾಸಕರ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ದೂರವಾಣಿ ಕರೆಯನ್ನು ಸ್ವೀಕರಿಸುವುದಿಲ್ಲ.

ಪಕ್ಷದ ಶಾಸಕರಾದ ನಮಗೆ ಸುಳ್ಳು ಹೇಳುತ್ತಾರೆ. ಈ ದುರಹಂಕಾರದ ವರ್ತನೆಯನ್ನು ತಿದ್ದುಕೊಳ್ಳುವಂತೆ ಸಚಿವರಿಗೆ ತಿಳಿ ಹೇಳಬೇಕು. ಮುಖ್ಯಮಂತ್ರಿಗಳನ್ನ ಹೊರತುಪಡಿಸಿದ್ರೆ ಉಳಿದ ಎಲ್ಲರೂ ಬದಲಾವಣೆ ಆಗ್ತಾರೆ. ನೋಡಿದ ಮುಖಗಳನ್ನೇ ಜನ ಅದೆಷ್ಟು ಬಾರಿ ನೋಡ್ತಾರೆ ಎಂದು ಬೇಸರ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *