Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಬ್ಜ ಟೀಸರ್ ಕೆಜಿಎಫ್ ರೀತಿ ಎಂದವರಿಗ ಉಪೇಂದ್ರ ಕೊಟ್ಟ ಉತ್ತರ ಶಾಕ್ ನೀಡಿದೆ..!

Facebook
Twitter
Telegram
WhatsApp

 

ಸ್ಯಾಂಡಲ್ವುಡ್ ನಲ್ಲಿ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡುವುದಕ್ಕೆ ರೆಡಿಯಾಗಿದೆ. ಉಪೇಂದ್ರ ಹಾಗೂ ಸುದೀಪ್ ಅಭಿನಯದ ಕಬ್ಜ ಸಾಕಷ್ಟು ಸದ್ದು ಮಾಡಿ ಸುದ್ದಿಯಲ್ಲಿದೆ. ಇತ್ತಿಚೆಗೆ ರಿಲೀಸ್ ಆದ ಟೀಸರ್ ಟ್ರೆಂಡಿಂಗ್ ನಲ್ಲಿತ್ತು. ಆದರೆ ಕೆಜಿಎಫ್ ಫೀಲ್ ಕೊಟ್ಟಿದೆ ಎಂಬುದೇ ಎಲ್ಲರ ಅಭಿಪ್ರಾಯವಾಗಿತ್ತು.

ಸೆಪ್ಟೆಂಬರ್ 18 ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮೊದಲೇ ಅಂದರೆ ಸೆಪ್ಟೆಂಬರ್ 17ರಂದೇ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಕಬ್ಜ ಟೀಸರ್ ಟ್ರೆಂಡಿಂಗ್ನಲ್ಲಿ ಕೂಡ ಇತ್ತು. ಆದರೆ ನೋಡಿದ ಅನೇಕರು ಇದು ಕೆಜಿಎಫ್ ಸಿನಿಮಾ ರೀತಿಯಲ್ಲಿಯೇ ಇದೆ ಎಂದಿದ್ದರು. ಇದೀಗ ಅದಕ್ಕೆ ಉಪೇಂದ್ರ ನಗು ನಗುತ್ತಾ ಉತ್ತರ ಕೊಟ್ಟಿದ್ದಾರೆ.

ಕಬ್ಜ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಒಂದು ಕಡೆ ಉಪೇಂದ್ರ, ಇನ್ನೊಂದು ಕಡೆ ಸುದೀಪ್, ಮತ್ತೊಂದು ಕಡೆ ಡೈರೆಕ್ಟರ್ ಆರ್ ಚಂದ್ರು. ಹೀಗಾಗಿ ಸಿನಿಮಾ ಮೇಲೆ ಸಾಮಾನ್ಯವಾಗಿಯೇ ನಿರೀಕ್ಷೆಗಳಿವೆ. ಅದರ ಜೊತೆಗೆ ಸಿನಿಮಾದ ಅಪ್ಡೇಟ್ಗಳು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿತ್ತು, ಎಕ್ಸ್ಪೆಕ್ಟೇಷನ್ ಲೆವೆಲ್ ಹೆಚ್ಚು ಮಾಡಿತ್ತು. ಆದರೆ ಟೀಸರ್ ರಿಲೀಸ್ ಆದ ಮೇಲೆ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಅದೇ ಮಾತಾಗಿತ್ತು.

ಕೆಜಿಎಫ್ ಪಾರ್ಟ್ 1 ಹಾಗೂ ಕಬ್ಜ ಟೀಸರ್ನಲ್ಲಿರುವ ಫೋಟೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಿದ್ದರು. ಕೆಜಿಎಫ್ ರೀತಿಯಲ್ಲಿಯೇ ಇದೆ ಎಂದಿದ್ದರು. ಮತ್ತೊಂದು ಕೆಜೆಎಫ್ ನೋಡಿದಂತೆ ಆಗುತ್ತಿದೆ ಎಂದಿದ್ದರು. ಅದಕ್ಕೆಲ್ಲಾ ಈಗ ಉಪೇಂದ್ರ ಉತ್ತರ ನೀಡಿದ್ದಾರೆ.

ಟೀಸರ್ ನಿರೀಕ್ಷೆಗೂ ಮೀರಿ ಜನರನ್ನು ತಲುಪಿದ ಖುಷಿಯಲ್ಲಿ ನಿನ್ನೆ ಕಬ್ಜ ಚಿತ್ರತಂಡ ಪ್ರೆಸ್ಮೀಟ್ ಕರೆದಿತ್ತು. ಈ ವೇಳೆ ಟೀಸರ್ ಬಗ್ಗೆ ಬಂದ ಕಮೆಂಟ್ಗಳ ಬಗ್ಗೆ ಮಾತನಾಡಿದ ಉಪೇಂದ್ರ, ಟೀಸರ್ ನೋಡಿದವರು ಕೆಜಿಎಫ್ ರೀತಿ ಇದೆ ಅಂತಿದ್ದಾರೆ. ಅಲ್ಲ ಕೆಜಿಎಫ್ ಬಂದಾಗ ಕೆಜಿಎಫ್ ನೋಡಿ ಕಲಿರಿ ಅಂತ ಹೇಳುತ್ತಾರೆ. ಕೆಜಿಎಫ್ ರೀತಿಯಲ್ಲಿಯೇ ಮಾಡಿದರೆ ನೋಡ್ರೀ ಕೆಜಿಎಫ್ ರೀತಿಯೇ ಮಾಡಿದ್ದಾರೆ ಅಂತಾರೆ. ಕೆಲವರಿಗೆ ಒಂದು ಕಾಯಿಲೆ ಇರುತ್ತೆ. ಚಳಿಗಾಲ ಬಂದಾಗ ಚಳಿಯನ್ನು ಬೈಕೊಳ್ಳುತ್ತಾರೆ. ಮಳೆಗಾಲ ಬಂದಾಗ ಏನು ಮಳೆ ಅಂತಾರೆ, ಬೇಸಿಗೆ ಬಂದ್ರೆ ಅಯ್ಯೋ ಬಿಸಲು ಅನ್ನುತ್ತಾರೆ ಎಂದು ಟೀಸರ್ ಬಗ್ಗೆ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಧಾರಾಕಾರ ಮಳೆಗೆ ಕೋಲಾರದಲ್ಲಿ ಎರಡೂವರೆ ಎಕರೆ ಬಾಳೆ ನಾಶ..!

ಕೋಲಾರ: ಮಳೆಯನ್ನು ಕಂಡು ರೈತ ಅದೆಷ್ಟೋ ವರ್ಷಗಳು ಆಗಿತ್ತೇನೋ ಎಂಬ ಭಾವನೆ ಈ ಬಾರಿಯ ಬಿಸಿಲು ನೋಡಿ ಮೂಡಿತ್ತು. ಆದರೆ ವರುಣರಾಯ ಕೃಪೆ ಏನೋ ತೋರಿದ್ದಾನೆ. ನಿನ್ನೆಯಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇನ್ಮುಂದೆ ಉತ್ತಮ ಮಳೆಯಾಗುವ

30 ವರ್ಷದ ಹಳೇ ಕಥೆ ಹೇಳಿದ ಶಿವರಾಮೇಗೌಡ : ಇಂಗ್ಲೆಂಡ್ ನಲ್ಲೂ ತಗಲಾಕಿಕೊಂಡಿದ್ರಂತೆ ರೇವಣ್ಣ..!

ಮಂಡ್ಯ: ಅಬ್ಬಬ್ಬಾ.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರಗಳು ದಿನೇ‌ ದಿನೇ ಒಂದೊಂದು ವಿಚಾರಗಳು ಬೆಳಕಿಗೆ ಬರುತ್ತಿವೆ. ಕಳೆದ ಮೂವತ್ತು ವರ್ಷಗಳ ಹಿಂದೆಯೂ ಇಂಥದ್ದೊಂದು ಘಟನೆ ಅದರಲ್ಲೂ ಇಂಗ್ಲೆಂಡ್ ನಲ್ಲಿ‌ ನಡೆದಿತ್ತಂತೆ. ಈ

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

error: Content is protected !!