Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟ್ರಯಲ್ ನಲ್ಲಿ ದ್ವಂದ್ವ ಹೇಳಿಕೆ ನೀಡಿದ ರತ್ನಪ್ರಭಾ : ದರ್ಶನ್ ಗೆ ಅನುಕೂಲವಾಗುತ್ತಾ..?

---Advertisement---

ಬೆಂಗಳೂರು: ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಟ್ರಯಲ್ ಶುರುವಾಗಿ 14 ದಿನವಾಗಿದೆ. ಇಂದು ಕೂಡ ರೇಣುಕಾಸ್ವಾಮಿ ಅವರ ತಂದೆ – ತಾಯಿಯ ವಿಚಾರಣೆ ನಡೆದಿದೆ. ಅವರ ಹೇಳಿಕೆಗಳನ್ನ ದಾಖಲು ಮಾಡಿಕೊಳ್ಳಲಾಗಿದೆ. ಈ ಸಂಬಂಧ ಇಂದು ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರ ತಾಯಿಯನ್ನ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗಿದೆ. ಈ ವೇಳೆ ಕೇಸ್ ನ ಧಿಕ್ಕನ್ನೇ ಬದಲಿಸುವಂತ ಹೇಳಿಕೆಗಳನ್ನ ರತ್ನಪ್ರಭಾ ನೀಡಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಪವಿತ್ರಾ ಗೌಡ ಪರ ವಾದ ಮಾಡುವಂತಹ ವಕೀಲರು ಒಂದಷ್ಟು ಪಾಯಿಂಟ್ಸ್ ಗಳನ್ನ ಇಟ್ಟುಕೊಂಡು ವಾದ ಮಂಡಿಸುತ್ತಾರೆ. ರೇಣುಕಾಸ್ವಾಮಿ ಬಳಕೆ ಮಾಡುತ್ತಿದ್ದಂತ ಮೊಬೈಲ್ ಸಂಖ್ಯೆ ಇದೇನಾ ಎಂದು ತನಿಖಾಧಿಕಾರಿಗಳು ಕೇಳಿದ್ದಾರೆ. ಅಂದು ಪೊಲೀಸರ ಹೇಳಿಕೆಯಲ್ಲಿ ಮಗ ಸ್ನೇಹಿತರ ಜೊತೆಗೆ ಊಟಕ್ಕೆ ಹೋಗ್ತೇನೆ ಎಂದು ಹೇಳಿದ್ದ, ಮೊಬೈಲ್ ನಲ್ಲಿ ನೋಡಿಕೊಂಡು ಕಾಲ್ ಮಾಡ್ತೇನೆ ಎಂದಿದ್ದ ರತ್ನಪ್ರಭಾ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ನನಗೆ ಮಗನ ಮೊಬೈಲ್ ನಂಬರ್ ಗೊತ್ತಿಲ್ಲ ಎಂದಿದ್ದಾರೆ.

 

ಸಮಯದ ಬಗ್ಗೆ ಕೇಳಿದಾಗಲೂ ನನಗೆ ನೆನಪಿಲ್ಲ ಎನ್ನುತ್ತಿದ್ದಾರೆ. ಅಂದು ಪೋಸ್ಟ್ ಮಾರ್ಟಮ್ ಸಮಯದಲ್ಲಿ ವೆಪನ್ ಅನ್ನ ಪೊಲೀಸರು ನಮ್ಮ ಕೈಗೆ ಕೊಟ್ಟಿದ್ದರು ಎಂದಿದ್ದರು. ತನಿಖೆಯೇ ಆಗದೆ ವೆಪನ್ ಸಿಗುವುದಕ್ಕೆ ಹೇಗೆ ಸಾಧ್ಯ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಈ ಎಲ್ಲಾ ಬೆಳವಣಿಗೆಯ ನಡುವೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಹಾಸ್ಟೆಲ್ ವಿಟ್ನೆಸ್ ಎಂದು ಪರಿಗಣನೆ ಮಾಡಿ ಎಂದಿದ್ದಾರೆ. ಸೋಮವಾರ ಈ ಸಂಬಂಧ ವಿಚಾರಣೆ ನಡೆಯಲಿದೆ. ಹಾಸ್ಟೆಲ್ ವಿಟ್ನೆಸ್ ಅಂದ್ರೆ ಏನು ಅಂದ್ರೆ ತನಿಖಾಧಿಕಾರಿಗಳ ಮುಂದೆ ಒಂದು ಹೇಳಿಕೆ, ಕೋರ್ಟ್ ಮುಂದೆ ಕೊಡುವುದು ಬೇರೆ ಹೇಳಿಕೆ ನೀಡಿದಾಗ ಅದನ್ನ ಹಾಸ್ಟೆಲ್ ವಿಟ್ನೆಸ್ ಎನ್ನುತ್ತಾರೆ‌. ಈ ಸಾಕ್ಷಿಯನ್ನ ಕನ್ಸಿಡರ್ ಮಾಡಬೇಡಿ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...