ಮಹಾರಾಜ ಕಾಲೇಜ್ ಚಲನಚಿತ್ರದ ಚಿತ್ರೀಕರಣಕ್ಕೆ ಕ್ಲಾಪ್ ನೀಡಿದ ರಘುಚಂದನ್

suddionenews
1 Min Read

ಚಿತ್ರದುರ್ಗ: ನಿರ್ಮಾಪಕ, ನಿರ್ದೇಶಕ ಬಸವರಾಜ್ ಬಣಕಾರ ಇವರ ಹಾಲಹಲ ಕಾದಂಬರಿ ಆಧಾರಿತ ಶ್ರೀಲಕ್ಷ್ಮೀ ಮೂವೀಸ್‌ರವರ ಮಹಾರಾಜ ಕಾಲೇಜ್ ಚಲನಚಿತ್ರದ ಚಿತ್ರೀಕರಣ ಪೂಜಾ ಸಮಾರಂಭ ಉಚ್ಚಂಗಿಯಲ್ಲಮ್ಮ ದೇವಸ್ಥಾನದಲ್ಲಿ ಬುಧವಾರ ನಡೆಯಿತು.

ಬಿಜೆಪಿ ಯುವ ಮುಖಂಡ ಹಾಗೂ ದೇವರಾಜ್‌ಅರಸ್ ಶಿಕ್ಷಣ ಸಂಸ್ಥೆಯ ಸಿ.ಇ.ಓ. ರಘುಚಂದನ್ ಮಹಾರಾಜ್ ಕಾಲೇಜ್ ಚಿತ್ರಕ್ಕೆ ಕ್ಲಾಪ್ ಹಾಕುವ ಮೂಲಕ ಯಶಸ್ವಿಯಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.

ಚಿತ್ರದ ನಿರ್ಮಾಪಕ, ನಿರ್ದೇಶಕ, ಸಾಹಿತ್ಯ, ಸಂಗೀತ ರಚನೆಕಾರ ಬಸವರಾಜ್ ಬಣಕಾರ, ನಟಿ ಶ್ರದ್ದ, ನಟ ವರುಣ್‌ಕುಮಾರ್, ಸಹ ನಟಿ ಪಲ್ಲವಿ, ಕೋ ಡೈರೆಕ್ಟರ್ ಶರಣ್, ಅಭಿಷೇಕ್ ರೈ, ಪಾಲುದಾರ ನಿರ್ಮಾಪಕಿ ಲಕ್ಷಿ್ಮದೇವಿ ಮಹೇಶ್, ಎಂ.ಜಿ.ರಾಜು, ಕಾರ್ಯನಿರ್ವಾಹಕ ಎನ್.ರವಿ, ಡಾ.ಟಿ.ನಾರಾಯಣರೆಡ್ಡಿ ಹಾಗೂ ಚಿತ್ರ ತಂಡದವರು ಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *