ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಕುಮಾರ್ ಆರೋಪ.. ಮುತ್ತತ್ತಿ ಸತ್ಯರಾಜ್ ಸಿನಿಮಾ ಕತೆ ಏನಾಯ್ತು..?

1 Min Read

 

 

ಸುದೀಪ್ ನಟನೆಯ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕುಮಾರ್ ಇದೀಗ ಸುದೀಪ್ ಅವರ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಸಿನಿಮಾ ಮಾಡೋಣಾ ಅಂತ ಹೇಳಿ ಹೇಳಿ ಕೈಗೆ ಸಿಗದೆ ಓಡಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಮುತ್ತತ್ತಿ ಸತ್ಯರಾಜ್ ಸಿನಿಮಾ ಮಾಡೋಣಾ ಅಂತ ಹೇಳಿದ್ರು. ಹಣ ಪೂರ್ತಿ‌ ಕೊಟ್ಟಿದ್ದೀನಿ. ನಂದಕಿಶೋರ್ ರನ್ನು ಕರೆಸಿ, ಹಣ ಕೊಡಿಸಿದ್ರು. ಆದರೆ ಸಿನಿಮಾ ಮಾಡೋಕೆ‌ ಕೈಗೆ ಸಿಕ್ತಿಲ್ಲ. ಅವರ ಪತ್ನಿಗೂ ವಾಯ್ಸ್ ಮೆಸೇಜ್ ಕಳುಹಿಸಿದ್ದೀನಿ.

ಸುಳ್ಳು ಸುಳ್ಳು ಆರೋಪ ಮಾಡ್ತೀರ. ನನ್ನ ಮುಂದೆ ನೇರವಾಗಿ ಹೇಳಿ. ಸುಳ್ಳು ಆರೋಪ ಮಾಡಬೇಡಿ. 15-20 ವರ್ಷ ಇದ್ದವರು. ಆಯ್ತು ಖುಷಿಯಿಂದ ಇದ್ದವರು ಖುಷಿಯಿಂದ ಹೋಗೋಣಾ. ಇವತ್ತು ಪ್ರೆಸ್ ಮೀಟ್ ಗೆ ಬರುವ ಹಾಗೆ ಮಾಡಿದ್ದು ಸುದೀಪ್ ಅವರು. ಎಷ್ಟು ಅಂತ ಬಗ್ಗ ಬೇಕು. ತಾಳ್ಮೆ ಕಳೆದುಕೊಂಡಿದ್ದೀನಿ.

ಅವರು ಏನು ಭರವಸೆ ಕೊಟ್ಟಿದ್ದರು, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಇಲ್ಲವಾದರೆ ಚಿತ್ರರಂಗದ ಅಧ್ಯಕ್ಷರ ಜೊತೆಗೆ ಮಾತನಾಡಿ, ಆಮೇಲೆ ನಿರ್ಧಾರ ಮಾಡುತ್ತೇನೆ. ನಮ್ಗೆ ಸ್ವಿಚ್ಡ್ ಆಫ್ ಆಗಿರುವ ನಂಬರ್ ಕೊಡ್ತಾರೆ. ಮನೆ ಹತ್ರ ಹೋದ್ರೆ ಕೈಗೆ ಸಿಗಲ್ಲ. ಮನುಷ್ಯ ದೇವರಿಗೆ ಹೆದರುತ್ತಾನೆ ಅಲ್ವಾ. ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಹಣ ತೆಗೆದುಕೊಂಡಿಲ್ಲ ಅಂತ ಬೇಸರ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *